ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನ-ವಾರ್ಷಿಕ ಜಾತ್ರಾಮಹೋತ್ಸವ, ಚಂಡಿಕಾಯಾಗದ ಆಮಂತ್ರಣ ಪತ್ರ ಬಿಡುಗಡೆ

0

ಮಡಂತ್ಯಾರು: ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಮತ್ತು ಚಂಡಿಕಾಯಾಗವು ಜ.24ರಂದು ನಡೆಯಲಿದೆ.ಇದರ ಆಮಂತ್ರಣ ಪತ್ರ ಬಿಡುಗಡೆಯನ್ನು ಶ್ರೀ ಕ್ಷೇತ್ರ ಪಾರೆಂಕಿ ಆಡಳಿತ ಮೊಕ್ತೇಸರರು ಯಂ.ವಿಠಲ ಶೆಟ್ಟಿ ಮೂಡಾಯೂರು ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪಾರೆಂಕಿ ಪ್ರಧಾನ ಅರ್ಚಕರು ಪೇಜಾವರ ಟಿ.ವಿ ಶ್ರೀಧರ ರಾವ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕಾಂತಪ್ಪ ಗೌಡ ಹಟತ್ತೋಡಿ, ಕೊಡಂಗೆತ್ತಾಯ ದೈವದ ಆಡಳಿತದಾರರು ಸನತ್ ಕುಮಾರ್ ಪಡಿವಾಳ್ ಮೂಡಾಯೂರು ಗುತ್ತು, ಪವಿತ್ರವಾಣಿಯ ರಮೇಶ್ ಅಂರ್ಬುಡತ್ತಾಯ ಹಾಗೂ ಸದಸ್ಯರಾದ ಯಂ.ರತ್ನಾಕರ ಶೆಟ್ಟಿ, ಡಾ| ಕೆ.ಸುಬ್ರಹ್ಮಣ್ಯ ಬಲ್ಲಾಳ್, ಗುರುರಾಜ್, ಹಚ್ಚಬೆ, ಸುಂದರ ಪೂಜಾರಿ ಕೋಟೆ, ಪುಷ್ಪರಾಜ್ ಗೌಡ ಪಾರೆಂಕಿ, ಬೇಬಿ ಎ.ಕೊಡೆಂಜೋಡಿ, ವೇದಾವತಿ ಆಚಾರ್ಯ ಪಾರೆಂಕಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here