ರತ್ನಮಾನಸ ವಸತಿ ನಿಲಯದಲ್ಲಿ ಹೊಸ ವರ್ಷ ಆಚರಣೆ

0

ಉಜಿರೆ: ರತ್ನಮಾನಸ ವಸತಿ ನಿಲಯದಲ್ಲಿ ಹೊಸ ವರ್ಷವನ್ನು ದೀಪ ಪ್ರಜ್ವಲಿಸುವುದರ ಮೂಲಕ ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳು ವರ್ಷದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿ ವರ್ಷದ ಅಂತ್ಯ ಮತ್ತು ಹೊಸ ವರ್ಷದ ಆರಂಭವನ್ನ ದೇವರ ಕುಣಿತ ಭಜನೆ ಹಾಗೂ ಸಂಧಿ ಕಾಲದಲ್ಲಿ ದೀಪವನ್ನು ಶಾಂತಿ ಮಂತ್ರದೊಂದಿಗೆ ಸಾಮೂಹಿಕವಾಗಿ ಪ್ರಜ್ವಲಿಸಲಾಯಿತು.ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮದ ದೀಪವನ್ನು ಮತ್ತು ಹೊಸವರ್ಷದ ಸ್ವಾಗತ ದೀಪವನ್ನು ಶ್ರೀ ಧ.ಮ ಶಿಕ್ಷಣ ಸಂಯೋಜಕ ಬಿ.ಸೋಮಶೇಖರ ಶೆಟ್ಟಿ ಹಾಗೂ ಅಮೃತ್ ಸಿಲ್ಕ್ಸ್ ಮಾಲೀಕ ಪ್ರಶಾಂತ್ ಜೈನ್ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.

ನಂತರ ವಿದ್ಯಾರ್ಥಿಗಳಿಗೆ ರತ್ನಮಾನಸದ ಹಿರಿಯ ವಿದ್ಯಾರ್ಥಿ ಪ್ರಸ್ತುತ ಮುಂಬೈನಲ್ಲಿ ಇಂಜಿನಿಯರ್ ಆಗಿರುವ ರೆಸ್ ಕೆ ಹಾಗೂ ಪ್ರಶಾಂತ್ ಜೈನ್‌ರವರು ಕೇಕ್ ಮತ್ತು ಸಿಹಿಯನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನಿಲಯ ಪಾಲಕ ಯತೀಶ್ ಕೆ ಬಳಂಜ, ಸಹಶಿಕ್ಷಕರಾದ ರವಿಚಂದ್ರ ಬಿ, ತ್ರಿಭುವನ್ ಜೈನ್, ಉದಯರಾಜ್, ಉದಯಕುಮಾರ್ ಹಾಗೂ ಡಿ-ಎಡ್ ಕಾಲೇಜಿನ ಉಪನ್ಯಾಸಕ ಮಂಜು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here