ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನೂತನ ಮಹಿಳಾ ವೇದಿಕೆ ಪದಾಧಿಕಾರಿಗಳ ಆಯ್ಕೆ

0

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಡಿ.30ರಂದು ನಡೆಸಲಾಯಿತು.

ಗೌರವಾಧ್ಯಕ್ಷರಾಗಿ ಶುಭಾಷಿಣಿ ಜನಾರ್ಧನ ಗೌಡ, ಅಧ್ಯಕ್ಷರಾಗಿ ಗೀತಾ ರಾಮಣ್ಣ ಗೌಡ, ಕಾರ್ಯದರ್ಶಿಯಾಗಿ ಲೀಲಾ ಬೆಳಾಲು, ಜೊತೆ ಕಾರ್ಯದರ್ಶಿಯಾಗಿ ಮೀನಾಕ್ಷಿ ಮಹಾಬಲ ಗೌಡ, ಉಪಾಧ್ಯಕ್ಷರುಗಳಾಗಿ ದಿವಿಜ ಗಣೇಶ್ ಗೌಡ ಮತ್ತು ದಯಾಮಣಿ ರವೀಂದ್ರನಾಥ ಗೌಡ, ಕೋಶಾಧಿಕಾರಿಯಾಗಿ ಶೋಭಾ ನಾರಾಯಣ ಗೌಡ ಆಯ್ಕೆಯಾದರು.

ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕು ಸಂಘದ ಕಾರ್ಯದರ್ಶಿ ಗಣೇಶ್ ಗೌಡ ಮತ್ತು ಉಪಾಧ್ಯಕ್ಷ ನಾರಾಯಣ ಗೌಡ ದೇವಸ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ನೂತನ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.

LEAVE A REPLY

Please enter your comment!
Please enter your name here