ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

0

ಧರ್ಮಸ್ಥಳ: ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರರ ಭವ್ಯ ಮಂದಿರ ಉದ್ಘಾಟನೆಯ ನಿಮಿತ್ತವಾಗಿ ಇಡೀ ದೇಶದಾದ್ಯಂತ ಶ್ರೀ ರಾಮ ಪವಿತ್ರ ಮಂತ್ರಾಕ್ಷತೆ ವಿತರಣೆಯ ಅಭಿಯಾನ ನಡೆಯುತ್ತಿದೆ.

ಜನವರಿ 1 ರಿಂದ ಈ ಅಭಿಯಾನ ಪ್ರಾರಂಭಗೊಂಡಿದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮಂತ್ರಾಕ್ಷತೆ ವಿತರಿಸಲಾಗಿದೆ.ಧರ್ಮಸ್ಥಳ ಗ್ರಾಮದಲ್ಲಿ ಪ್ರಥಮವಾಗಿ ಹೆಗ್ಗಡೆಯವರ ನಿವಾಸದಿಂದ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತಿನ ಭಾಸ್ಕರ್ ಧರ್ಮಸ್ಥಳ, ಗ್ರಾಮದ ಅಭಿಯಾನ ಪ್ರಮುಖರಾದ ಶ್ರೀನಿವಾಸ ರಾವ್, ರಾಮಚಂದ್ರ ಭಟ್, ಸಂದೀಪ್ ರೈ, ರಾಷ್ಟ್ರೀಯ ಸ್ವಯಸೇವಕ ಸಂಘದ ಪೃಥ್ವಿಶ್ ಧರ್ಮಸ್ಥಳ, ಮಹಿಳಾ ಪ್ರಮುಖರಾದ ಶಾಂಭವಿ ರೈ ಹಾಗೂ ಧನಲಕ್ಷ್ಮಿ ಜನಾರ್ಧನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here