ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

0

ಶಿಶಿಲ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರತಿಷ್ಟ ದಿನದ ಪ್ರಯುಕ್ತ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ 1001 ಶ್ರೀ ರಾಮ ಜಪ ಯಜ್ಞ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಈ ಕಾರ್ಯಕ್ರಮ ಆಮಂತ್ರಣ ಪತ್ರವನ್ನು ಜ.1ರಂದು ಶಿಶಿಲದಿಂದ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ ಶೀನಪ್ಪ ಮುಚ್ಚಿರಡ್ಕ ಇವರು ಬಿಡುಗಡೆ ಮಾಡಿದರು.

ಈ ಸಮಯದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಮೂಡೆತ್ತಾಯ, ಉಪಾಧ್ಯಕ್ಷರಾದ ಆನಂದ ಪೂಜಾರಿ, ಕಾರ್ಯದರ್ಶಿ ಕರುಣಾಕರ ಶಿಶಿಲ, ಗ್ರಾಮ ಪಂಚಾಯತ್ ಶಿಶಿಲ ಇದರ ಅಧ್ಯಕ್ಷರಾದ ಸುಧಿನ್ ಡಿ., ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಶಿಶಿಲ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ದೀಪಕ್ ಶಾಲೆಗುಡ್ಡೆ, ಕೊರಗಪ್ಪ ಗೌಡ ಪಡ್ಪು, ರೂಪೇಶ್ ಬೈಪಾಡಿ, ಯತೀಶ್ ಪೇರಿಕೆ, ಯೋಗೀಶ್ ಅಂಬೇಲ್ತಡ್ಕ, ಸಂತೋಷ ಅಮ್ಮುಡಂಗೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here