ಮುಂಡಾಜೆ ಪ್ರೌಢಶಾಲೆ 1989-90ರ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ: ವಿದ್ಯಾಸಂಸ್ಥೆಗೆ ನಿಧಿ ಸಮರ್ಪಣೆ

0

ಮುಂಡಾಜೆ: ಪ್ರೌಢಶಾಲೆ ಮುಂಡಾಜೆ ಇದರ 1989-90 ಸಾಲಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವು ಹಿರಿಯ ವಿದ್ಯಾರ್ಥಿ ಸಂಘ ಮುಂಡಾಜೆ ಇದರ ಸಹಭಾಗಿತ್ವದಲ್ಲಿ ಡಿ.24 ರಂದು ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆ ಇದರ ಸಭಾಂಗಣದಲ್ಲಿ ನಡೆಯಿತು.

ಹಿರಿಯ ವಿದ್ಯಾರ್ಥಿ ಮುರಳಿಧರ ನಾಯಕ್ ಇವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಯಿತು.ಆ ಸಾಲಿನ ವಿದ್ಯಾರ್ಥಿಗಳಾದ ಶೇಖರ ನಾಯ್ಕ, ಜಯಾನಂದ ಗೌಡ, ರಾಜೇಶ್ ಗೌಡ, ಚಂದ್ರಮೋಹನ ಮರಾಠೆ, ಪುರುಷೋತ್ತಮ ಶೆಟ್ಟಿ ಅಗರಿ, ಸುಜಯ ನಾಗೇಂದ್ರ ಅಡೂರ್, ಪ್ರದರ್ಶ ಪರಾಂಜಪೆ, ಭಾಸ್ಕರ ಗೌಡ ದೇವಸ್ಯ, ಮುರಳಿಧರ ನಾಯಕ್, ಟಾಗೂರ್ ನಾಥ್ ಶೆಟ್ಟಿ ಹುರ್ತಾಜೆ, ಪ್ರಸನ್ನ ಕೆ ಎಂ , ಸುಧೀರ್ ಪರಾಂಜಪೆ , ಜಯರಾಮ ಶೆಟ್ಟಿ ನೆಯಾಲ್ , ಪ್ರಸನ್ನ ತಾಮನ್ಕರ್, ಜಲಜ ಚಾರ್ಮಾಡಿ, ಅನಿತಾ, ರಕ್ಷಾ ,ಲತಾ, ಸಾವಿತ್ರಿ ಇವರುಗಳು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ , ತಾವು ಬೆಳೆದು ಬಂದ ದಾರಿ ಹಾಗೂ ಇನ್ನಿತರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಜೆ ವೆಂಕಟೇಶ್ ಭಟ್, ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ ಇದರ ಅಧ್ಯಕ್ಷರಾದ ವಿನಯ ಚಂದ್ರ, ಸದಸ್ಯರಾದ ನಾರಾಯಣ ಪಢಕೆ ಇವರು ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ತಾವು ಸಂಗ್ರಹಿಸಿದ ನಿಧಿ ರೂ.1,27,503 ಅನ್ನು ಶಿಕ್ಷಣ ಸಂಸ್ಥೆಯ ಪೀಠೋಪಕರಣಕ್ಕಾಗಿ ಹಿರಿಯ ವಿದ್ಯಾರ್ಥಿ ಸಂಘದ ಸಮ್ಮುಖದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಿಗೆ ಸಮರ್ಪಿಸಲಾಯಿತು.ಪ್ರಸನ್ನ ತಾಮನ್ಕರ್ ಇವರು ಪ್ರಾಯೋಜಿಸಿ ಎಲ್ಲಾ ಮಿತ್ರರಿಗೆ ಟಿ-ಶರ್ಟ್ ಹಾಗೂ ಸ್ಮರಣಿಕೆಯನ್ನು ಸಮರ್ಪಿಸಿದರು.ಪುರುಷೋತ್ತಮಶೆಟ್ಟಿ ಇವರು ಲಘು ಉಪಹಾರ ಏರ್ಪಡಿಸಿದ್ದರು.ಕಾರ್ಯಕ್ರಮದ ಬಳಿಕ ಭಾಸ್ಕರ್ ಗೌಡ ದೇವಸ್ಯ ಇವರು ಉಜಿರೆಯ ಓಷನ್ ಪರ್ಲ್ ಇಲ್ಲಿ ಭೋಜನಕೂಟವನ್ನು ಏರ್ಪಡಿಸಿದರು.ಎಲ್ಲಾ ಸ್ನೇಹಿತರು ಸಹಕರಿಸಿದರು.

LEAVE A REPLY

Please enter your comment!
Please enter your name here