ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮನೆ ಮನೆ ಭಜನಾ ತಂಡಕ್ಕೆ ಚಾಲನೆ

0

ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ಡಿ 22 ರಂದು ಗ್ರಾಮ‌ ಸುಭೀಕ್ಷೆಗಾಗಿ 15 ಭಜನಾ ತಂಡಗಳ ಭಜನಾ ಸಂಕೀರ್ತನೆಯೊಂದಿಗೆ ಪಡಂಗಡಿ, ಓಡಿಲ್ನಾಳ, ಕುವೆಟ್ಟು, ಸೋಣಂದೂರು ಗ್ರಾಮದ ಮನೆ ಮನೆಗೆ ಶ್ರೀ ದೇವರ ಲೋಕ ಸಂಚಾರ ಕಾರ್ಯಕ್ರಮಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ ಭಟ್‌ ಮಠ ಉಪಸ್ಥಿತಿಯಲ್ಲಿ ರಾಘವೇಂದ್ರ ಭಟ್ ಮಠ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಚಾಲನೆ ನೀಡಿದರು.

ಮಾಜಿ ಶಾಸಕ ವಸಂತ ಬಂಗೇರ, ಜಯರಾಮ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ವಿನಯಚಂದ್ರ ಅಂಚನ್ ಕೆನರಾ ಸ್ಟೀಲ್ ಪಿಲಿಚಾಮುಂಡಿಕಲ್ಲು, ಕಾರ್ಯಧ್ಯಕ್ಷ ಸಂತೋಷ್ ಕುಮಾರ್ ಜೈನ್ ಪಡಂಗಡಿ, ಉಪಾಧ್ಯಕ್ಷರು ನಾರಾಯಣ ಮೂಲ್ಯ ಓಡೀಲು, ಅಜಿತ್ ಕುಮಾರ್ ಶೆಟ್ಟಿ ಕೋರ್ಯಾರು, ದಾಮೋದರ್ ಕುಂದರ್ ಸಬರಬೈಲು, ಶ್ರೀಕಾಂತ್ ಶೆಟ್ಟಿ ಮುಂಡಾಡಿ, ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಯ, ಜತೆ ಕಾರ್ಯದರ್ಶಿ ಲೀಲಾವತಿ ಕೆ ಪಣಕಜೆ, ಕೋಶಾಧಿಕಾರಿ ವಸಂತ ಗೌಡ ವರಕಬೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸದಸ್ಯರಾದ ಗಂಗಾಧರ ಭಟ್ ಕೆವುಡೇಲು, ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ವಿಜಯ ಸಾಲಿಯನ್ ಪಣಕಜೆ, ಶಾಂತಾ ಜೆ ಬಂಗೇರ, ರಾಮು ಪಡಂಗಡಿ, ಅಶ್ವಿನಿ ನಾಯಕ್ ಪಣಕಜೆ, ಯುವ ಸಮಿತಿ ಅಧ್ಯಕ್ಷ ಅಶ್ವಿತ್ ಓಡೀಲು, ಭಜನಾ ಸಮಿತಿ ಅಧ್ಯಕ್ಷ ಸಂದೇಶ್ ಅನಿಲ, ಮಾತೃ ಮಂಡಳಿ ಅಧ್ಯಕ್ಷೆ ಧನಲಕ್ಷಿ ಚಂದ್ರಶೇಖರ್ ಕರಿಯಬೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here