ಡಿ.23-24: ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನಲ್ಲಿ ‘ಎಕ್ಸೆಲ್ ಪರ್ಬ’

0

ಗುರುವಾಯನಕೆರೆ: ಇಲ್ಲಿಯ ಎಕ್ಸೆಲ್ ಪಿಯು ಕಾಲೇಜಿನಲ್ಲಿ ಡಿ.23 ಮತ್ತು 24 ರಂದು “ಎಕ್ಸೆಲ್ ಪರ್ಬ” ನಡೆಯಲಿದೆ.

ಡಿ.23 ರಂದು ಬಂಗಾಡಿ ಅರಮನೆಯ ಬಿ.ಯಶೋಧರ ಬಲ್ಲಾಳ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅನುವಂಶಿಕ ಅರ್ಚಕ ವೆಂಕಟರಮಣ ಅಸ್ರಣ್ಣ, ಪುಂಜಾಲಕಟ್ಟೆ ಪಿ.ಯು.ಕಾಲೇಜಿನ ನಿವೃತ್ತ ಪ್ರಾಂಶುಪಾಲರು ರಾಜವೀರ ಇಂದ್ರ, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾ‌ರ್ ಜನರಲ್ ವ.ಫಾ.ಜೋಸೆಫ್ ವಲಿಯಪರಂಬಿಲ್, ಬಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದೈವ ನರ್ತಕ ಮತ್ತು ಧರ್ಮದರ್ಶಿ ದೇಜಪ್ಪ ಬಾಚಕೆರೆ, ಜುಮ್ಮಾ ಮಸೀದಿ ಜಾರಿಗೆಬೈಲ್ ಇಮಾಮ್ ಜಾನಬಿ ಮುಹಮ್ಮದ್ ಯಾಸಿರ್ ಫಾಜಿಲ್ ಫುರ್ಕಾನಿ ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಡಿ.24 ರಂದು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ ಜಯರಾಜ್ ಅಮೀನ್, ಅಂಕೋಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಮನೋಹರ ಎಂ, ಬೆಳ್ತಂಗಡಿ ಉದ್ಯಮಿ ಶಮಂತ್ ಕುಮಾ‌ರ್ ಜೈನ್ ಬಿ., ಹಾಗೂ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌, ಪ್ರಾಂಶುಪಾಲ ನವೀನ್ ಕುಮಾ‌ರ್ ಮರೀಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here