ವೇಣೂರು ಶ್ರೀ ಮಹಾಲಿಂಗೇಶ್ವರ ಕೃಪಾ ಪೋಷಿತ ಭಜನಾ ಮಂಡಳಿಯ 60ನೇ ವಾರ್ಷಿಕ ಭಜನೆ

0

ವೇಣೂರು: ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ಭಜನಾ ಮಂಡಳಿ ವೇಣೂರು ಇದರ 60 ನೇ ವರ್ಷದ ಭಜನಾ ಕಾರ್ಯಕ್ರಮ ಡಿ.11ರಂದು ಜರಗಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಟಿ.ವಿ.ವಿಷ್ಣು ಮೂರ್ತಿ ಭಟ್ ದೀಪ ಬೆಳಗಿಸಿ ಭಜನಾ ಮಂಡಳಿಯ ಅಧ್ಯಕ್ಷ ಬಿ.ಹರಿಶ್ಚಂದ್ರ ಆಚಾರ್ಯ ಭಜನೆಗೆ ಚಾಲನೆ ನೀಡಿದರು.

ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಭಜನಾ ಕಾರ್ಯಕ್ರಮದಲ್ಲಿ ಪಡ್ಡಂದಡ್ಕ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ಗುಂದೂರಿ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿ, ವೇಣೂರು ಶ್ರೀ ರಾಮ ಭಜನಾ ಮಂಡಳಿಯ ತಂಡದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here