ಅಳದಂಗಡಿಯಲ್ಲಿ ಹಿಂದೂ ಹೃದಯ ಸಂಗಮ ಸಮಾವೇಶ

0

ಅಳದಂಗಡಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಹಿಂದೂ ಹೃದಯ ಸಂಗಮ ಸಮಿತಿ ವೇಣೂರು ಪ್ರಖಂಡ ವತಿಯಿಂದ ಹಿಂದೂ ಹೃದಯ ಸಂಗಮ ಸಮಾವೇಶ ಡಿ.10 ರಂದು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನ ವಠಾರದಲ್ಲಿ ಪುತ್ತೂರಿನ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಏಕ ಜಾತಿ ಧರ್ಮ ದ್ವಾರಕ ಮಾಯಿ ಮಠ ಶಂಕರಪುರದ ಶ್ರೀ ಸಾಯಿ ಈಶ್ವರ ಗುರೂಜಿ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮೂತ್ರರೋಗ ತಜ್ಞ ವೆನ್ಲಾಕ್ ಆಸ್ಪತ್ರೆಯ ಡಾ.ಸದಾನಂದ ಪೂಜಾರಿ, ಬದಿನಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಹಾಗೂ ಹಿಂದೂ ಹೃದಯ ಸಂಗಮ ಸಮಿತಿ ಅಧ್ಯಕ್ಷ ಜಯ ಸಾಲಿಯಾನ್ ಮತ್ತು ವಿಶ್ವ ಹಿಂದೂ ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಎಸ್ .ಆರ್. ಭಾಸ್ಕರ್ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಸಕ ಹರೀಶ್ ಪೂಂಜ, ಭಾಜಪಾ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ , ಪ್ರಮುಖರಾದ ಗಣೇಶ್ ಹೆಗ್ಡೆ, ರಾಜೀವ್ ಪೂಜಾರಿ, ರಘು, ಭಾಸ್ಕರ ಧರ್ಮಸ್ಥಳ, ಸೋಮನಾಥ್ ಬಂಗೇರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here