ಕುತ್ಲೂರು ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

0

ಕುತ್ಲೂರು: ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಮೂಡಬಿದ್ರೆ ವಿಭಾಗ, ಕೂತ್ಲೂರು ಗ್ರಾಮ ಅರಣ್ಯ ಸಮಿತಿ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಶ್ರೀಧರ ಅವರ ಅಧ್ಯಕ್ಷತೆಯಲ್ಲಿ ಡಿ.4ರಂದು ಕುತ್ಲೂರು ಮಂಜುಶ್ರೀ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಮಂಗ ಮತ್ತು ಕಾಡುಹಂದಿ ಹಾವಳಿಯ ಕುರಿತು ಚರ್ಚಿಸಲಾಯಿತು.

ಸಂಜೀವಿನಿ ಕಾರ್ಯಕ್ರಮದ ತಾಲೂಕು ವ್ಯವಸ್ಥಾಪಕೆ ಪ್ರತಿಮಾ, ಸಮಿತಿಯ ಸದಸ್ಯ ಕುಶಾಲಪ್ಪ ಗೌಡ, ನಾರಾವಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಆಶಾಲತಾ, ಗ್ರಾ.ಪಂ.ಸದಸ್ಯ ಸಂತೋಷ್, ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ರಾಜಶ್ರೀ ಮತ್ತು ಅಂಡಿಂಜೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.

ರೋಹನ್ ಸ್ವಾಗತಿಸಿ, ಆನಂದ ಸಾಲ್ಯಾನ್ ವಂದಿಸಿ, ಸಮಿತಿಯ ಸದಸ್ಯ ಕೇಶವ ನಿರೂಪಿಸಿದರು.

LEAVE A REPLY

Please enter your comment!
Please enter your name here