ಬೆಳಾಲು: ಅನಂತೋಡಿ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳಾಲು: ಡಿ.25 ಮತ್ತು 26 ರಂದು ನಡೆಯುವ ಬೆಳಾಲು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಇದರ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಪ್ರಧಾನ ಸಂಚಾಲಕ ದೇಜಪ್ಪ ಗೌಡ ಅರಣೆಮಾರು ವಹಿಸಿದರು.

ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧ‌ರ್ ಕುಮಾ‌ರ್ ಜೈನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ನೋಟರಿ ವಕೀಲ ಶ್ರೀನಿವಾಸ ಗೌಡ, ಉಪಾಧ್ಯಕ್ಷ ಮಮತ ದಿನೇಶ್ ಪೂಜಾರಿ ಉಪ್ಪಾರ್, ಸಮಿತಿಯ ಹಿರಿಯ ಸದಸ್ಯ ಎನ್.ಜತ್ತಣ್ಣ ಗೌಡ ಏರ್ದೊಟ್ಟು, ಮಹಿಳಾ ಸಮಿತಿ ಗೌರವಾಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಭಜನಾ ಮಂಡಳಿ ಅಧ್ಯಕ್ಷ ನವೀನ್ ಗೌಡ ಕಂಬಳದಡ್ಡ, ಶ್ರೀ ಕ್ಷೇ. ಧ.ಗ್ರಾ. ಯೋಜನೆ ಬೆಳಾಲು ಇದರ ಸೇವಾನಿರತೆ ಆಶಾ, ಮಾಯ ಮಹಾದೇವ ದೇವಸ್ಥಾನ ಸಮಿತಿ ಸದಸ್ಯ ಶಿವಕುಮಾ‌ರ್ ಬಾರಿತ್ತಾಯ ಪಾರಳ, ಹಿರಿಯ ಸದಸ್ಯ ಕುಜಿಂಬೊಟ್ಟು ಉದಿತ್ ಕುಮಾರ್ ಜೈನ್, ಲಿಂಗಪ್ಪ ಪೂಜಾರಿ ಬನಂದೂರು, ದೇಜಪ್ಪ ಗೌಡ ಎಳ್ಳುಗದ್ದೆ ಹಾಗೂ ಬೈಲುವಾರು ಸಮಿತಿ ಸಂಚಾಲಕರು-ಸಹಸಂಚಾಲಕರು, ಜಾತ್ರೆ ಉಪಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಮಿತಿ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿ, ಶಿವಪ್ರಸಾದ್ ಕೆ ಹಾಗೂ ನಾರಾಯಣ ಗೌಡ ಎಳ್ಳುಗದ್ದೆ ಕಾರ್ಯಕ್ರಮ ನಿರೂಪಿಸಿ, ಉಮೇಶ್ ಜಿ. ಮಂಜೊತ್ತು ವಂದಿಸಿದರು.

LEAVE A REPLY

Please enter your comment!
Please enter your name here