ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಚಿಕಿತ್ಸಾ ನೆರವು

0

ಗುರುವಾಯನಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ.ಬಿ.ಸಿ. ಟ್ರಸ್ಟ್ (ರಿ) ಗುರುವಾಯನಕೆರೆ ನಾರಾವಿ ವಲಯದ ಶಿವನಿಧಿ ಸ್ವ.ಸಹಾಯ ಸಂಘದ ಚಂಪಾರವರ ಮಗನಾದ ವಿಗ್ನೇಶ್ ರವರಿಗೆ ಧ್ವನಿ ಪೆಟ್ಟಿಗೆಯಲ್ಲಿ ಗೆಡ್ಡೆ ಬೆಳೆದು ಸ್ವರವೇ ಸಂಪೂರ್ಣ ಸ್ತಬ್ದವಾಗಿ ಹೋಗಿ carotid body tumor ಎಂಬ ವಿಚಿತ್ರ ಕಾಯಿಲೆ ಯಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ದಿಂದ ವಿಶೇಷವಾಗಿ ಖಾವಂದರು ಮಂಜೂರು ಮಾಡಿರುವ ರೂ 25,000 ಮೊತ್ತದ ಮಂಜೂರಾತಿ ಪತ್ರವನ್ನು ನಾರವಿ ವಲಯದ ಮೇಲ್ವಿಚಾರಕರಾದ ದಮಯಂತಿರವರು ಹಾಗೂ ಸೇವಾಪ್ರತಿನಿಧಿ ಶಶಿಕಲಾ ಹಾಗೂ ಒಕ್ಕೂಟ ಅಧ್ಯಕ್ಷ ಸಂತೋಷ್ ಪೂಜಾರಿ ಹಾಗೂ ಯುವಕ ಮಂಡಲ ಅಧ್ಯಕ್ಷರಾದ ನವೀನ್ ಕೋಟ್ಯಾನ್ ಉಪಸ್ಥಿತಿಯಲ್ಲಿ ವಿಗ್ನೇಶ್ ರವರ ಮಾವ ಭೋಜ ಪೂಜಾರಿ ಹಾಗೂ ಮಹಾಬಲ ರವರಿಗೆ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here