ಕಳೆಂಜ: ಕಳೆಂಜ ಗ್ರಾಮದ ಶಿಬರಾಜೆ ಖಂಡಿಗ ಹೊಳೆ ಸಮೀಪ ಸ್ಥಳೀಯ ನಿವಾಸಿ ತಿಮ್ಮಪ್ಪ ಗೌಡರ (50ವ)ಮೃತದೇಹ ಪತ್ತೆಯಾಗಿದೆ.
ನಿನ್ನೆ(ನ.22) ಸಂಜೆ 4 ಗಂಟೆಯ ಸುಮಾರಿಗೆ ಕಾಣೆಯಾಗಿದ್ದು, ಇಂದು (ನ.23) ಬೆಳಿಗ್ಗೆ ಸಮೀಪದ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಇವರು ಮನೋರೋಗದಿಂದ ಬಳಲುತ್ತಿದ್ದರು ಎಂದು ಮನೆಯವರು ತಿಳಿಸಿದ್ದಾರೆ.
ಮೃತರು ಅಪ್ಪ, ಅಮ್ಮ, ಪತ್ನಿ, ಮಕ್ಕಳಾದ ಜೀವನ್, ಹೇಮಂತ್, ಬಂಧು-ಬಳಗವನ್ನು ಅಗಲಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.