ಜಾರಿಗೆಬೈಲು ಅಬ್ದುಲ್ ರಹಿಮಾನ್ ರವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿ

0

ನ್ಯಾಯತರ್ಪು ಗ್ರಾಮದ ಜಾರಿಗೆಬೈಲುವಿನ ಅಬ್ದುಲ್ ರಹಿಮಾನ್ ರವರ ಮನೆಗೆ ಸಿಡಿಲು ಬಡಿದು ಭಾಗಶಃ ಮನೆಯ ವಿದ್ಯುತ್ ಉಪಕರಣ, ಮನೆಯ ಸಾಮಾಗ್ರಿಗಳಿಗೆ ಆಪಾರ ಹಾನಿಯಾಗಿದೆ.ಸ್ಥಳೀಯರ ಅಭಿಪ್ರಾಯದಂತೆ ಸುಮಾರು 2 ಲಕ್ಷ ಕ್ಕೂ ಹೆಚ್ಚಿನ ಪ್ರಮಾಣದ ನಷ್ಟ ಆಗಿದೆ ಎಂದು ಹೇಳುತ್ತಾರೆ.

ಕಳಿಯ ಗ್ರಾಮ ಪಂಚಾಯತ್ ಸದಸ್ಯ ಲತೀಫ್ ಪರಿಮ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಸದಸ್ಯರಿಗೆ ಹಾಗೂ ಸಂಬಂಧಿಸಿದ ಇಲಾಖೆಗೆ ತಿಳಿಸಿದರು.ವಿಷಯ ತಿಳಿದು ಕೂಡಲೇ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ., ಸದಸ್ಯರಾದ ವಿಜಯ ಗೌಡ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರಾದ ಹಕೀಮ್ ಗೋವಿಂದೂರು ಹಾಗೂ ನೌಫಳ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here