ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ- ದೀಕ್ಷಾ ಗ್ರಂಥಿ ಕಾರ್ಯಕ್ರಮ, ಮಹಿಳಾ ಬಿಲ್ಲವ ವೇದಿಕೆ ಉದ್ಘಾಟನಾ ಸಮಾರಂಭ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

0

ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು ಇವರ ಜಂಟಿ ಆಶ್ರಯದಲ್ಲಿ ನಿರಂಜನ ಶಾಂತಿ ಇವರ ಪೌರೋಹಿತ್ಯದಲ್ಲಿ ಗುರು ಪೂಜೆ, ಹಾಗೂ ದೀಕ್ಷಾ ಗ್ರಂಥಿದಾರಣೆ ನೆರವೇರಿತು.ನಂತರ ಮಹಿಳಾ ಬಿಲ್ಲವ ವೇದಿಕೆ ಉದ್ಘಾಟನಾ ಸಮಾರಂಭ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಗಂಗಾಧರ್ ಮಿತ್ತಮಾರು ಮಾಡಿದರು.

ಅಧ್ಯಕ್ಷತೆಯನ್ನು ಸಂಕೇತ್ ಬಂಗೇರ, ಅಧ್ಯಕ್ಷರು, ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು ಇವರು ವಹಿಸಿದ್ದರು.

ವೇದಿಕೆಯಲ್ಲಿ ರಕ್ಷಿತ್ ಶಿವರಾಂ, ಅಧ್ಯಕ್ಷರು, ಬೆಸ್ಟ್ ಫೌಂಡೇಶನ್, ಬೆಳ್ತಂಗಡಿ, ಚಿದಾನಂದ ಪೂಜಾರಿ ಎಲ್ದಡ್ಕ, ಅಧ್ಯಕ್ಷರು, ಶ್ರೀ ಗುರು ನಾರಾಯಣ ಸೇವಾ ಸಂಘ (ರಿ.) ಬೆಳ್ತಂಗಡಿ, ನಿತೇಶ್ ಕೋಟ್ಯಾನ್, ಶಾಂಭವಿ ಬಂಗೇರ, ಸೋಮನಾಥ ಬಂಗೇರ ವರ್ಪಾಳೆ, ಸತೀಶ್ ಪೂಜಾರಿ, ಮುಂಬಾಯಿ, ನವೀನ್ ಸಾಲಿಯಾನ್ ಪಾಲ್ದಿಮನೆ, ಗೀತಾ.ಎಚ್, ಅಮ್ಮಾಜಿ ಹೊಕ್ಕಳ, ಗುರುವಪ್ಪ ಪೂಜಾರಿ ಪಟ್ಲ, ಕೆ.ಸಂಜೀವ ಪೂಜಾರಿ ಕೊಡಂಗೆ, ಕೊರಗಪ್ಪ ಪೂಜಾರಿ ದಾಯಿಗುಡ್ಡೆ, ವಿಶ್ವನಾಥ ಪೂಜಾರಿ ಕುದ್ಯಾಡಿ, ನವೀನ್ ಕುಮಾರ್ ಪಾದೆಮಾರಡ್ಡ, ಕೊರಗಪ್ಪ ಪೂಜಾರಿ, ಪ್ರವೀಣ್ ಕೋಟ್ಯಾನ್ ಪಾಲಣೆ, ಸಂತೋಷ್ ಕೋಟ್ಯಾನ್ ಬಳಂಜ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಧನುಷ್ ಕಾಡಂಗೆ, ವಿಜಯ್ ಕುಮಾರ್ ಸ್ವಾಗತಿಸಿ ಪ್ರಜ್ಞಾ ಒಡಿಲ್ನಾಳ, ಕಾರ್ಯಕ್ರಮ ನಿರೂಪಿಸಿ, ನಂದನ್ ಕುಮಾರ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here