“ನಮ್ಮ ಮಣ್ಣು ನಮ್ಮ ದೇಶ” ಪರಿಕಲ್ಪನೆಯಡಿಯಲ್ಲಿ ದೆಹಲಿಗೆ ತಲುಪಿದ ಬೆಳ್ತಂಗಡಿ ತಂಡ

0

ಬೆಳ್ತಂಗಡಿ: ನಮ್ಮ ಮಣ್ಣು ನಮ್ಮ ದೇಶ ಪರಿಕಲ್ಪನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ಕರ್ತವ್ಯಪಥದಲ್ಲಿ ನಿರ್ಮಿಸಲು ಉದ್ದೇಶಿಸುವ ಯೋಧರ ಸ್ಮಾರಕಕ್ಕೆ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ವತಿಯಿಂದ ಸಂಗ್ರಹಿಸಲಾದ ಪವಿತ್ರ ಮಣ್ಣನ್ನು ಬೆಳ್ತಂಗಡಿಯಿಂದ ದೆಹಲಿಗೆ ತಲುಪಿಸಲಾಯಿತು.

ಬೆಳ್ತಂಗಡಿ ಬಿಜೆಪಿ ಉಪಾಧ್ಯಕ್ಷರುಗಳಾದ ಸೀತಾರಾಮ ಬಿ.ಎಸ್., ಕೊರಗಪ್ಪ ಗೌಡ ಅವರು ಪವಿತ್ರ ಮಣ್ಣನ್ನು ತಲುಪಿಸಲು ಜಿಲ್ಲೆಯಿಂದ 17 ಮಂದಿಯ ತಂಡದಲ್ಲಿ ತೆರಳಿದ್ದಾರೆ.

ಅ.31ರಂದು ದೆಹಲಿಯಲ್ಲಿ ಮಣ್ಣನ್ನು ಸಮರ್ಪಿಸುವ ಸಮಾರಂಭ ನಡೆಯಿತು.

ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಸ್ಥಾನ, ದೈವಸ್ಥಾನ ಹಾಗೂ ಯೋಧರ ಮನೆಗಳಲ್ಲಿ ಸಂಗ್ರಹಿಸಲಾದ ಮಣ್ಣನ್ನು ಕಲಶದಲ್ಲಿ ಸಂಗ್ರಹಿಸಿ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here