ಬಿಎಮ್ಎಸ್ ಆಟೋ ಚಾಲಕ ಮಾಲಕರ ಸಂಘದಿಂದ ಧನ ಸಹಾಯ

0

ಮಡಂತ್ಯಾರು : ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ಕ್ಷೇಮ ನಿಧಿ ಯೋಜನೆಯ 7ನೇ ಸಹಾಯಧನ ರೂ.4000/ ವನ್ನು ಆಟೋ ಚಾಲಕ ಮಾಲಕರ ಸಂಘದ ಬಿಎಮ್ಎಸ್ ಸಂಯೋಜಿತ ಮಡಂತ್ಯಾರು ವಲಯದ ಸದಸ್ಯ ಮಹಮ್ಮದ್ ನಜೀರ್ ಅಪಘಾತವಾಗಿ ಗಾಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುತ್ತಾರೆ.

ಅವರಿಗೆ ಸಂಘದ ಅಧ್ಯಕ್ಷ ಸಂದೀಪ್ ಕುಂದುರ್, ಕಾರ್ಯದರ್ಶಿ ಶಿವರಾಮ ಮಡಿವಾಳ, ಸಂಘದ ಮಾಜಿ ಆಧ್ಯಕ್ಷ ಸತೀಶ್ ಮರಕ್ಕಡ, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಹಾಗೂ ತಾಲೂಕು ಪ್ರ.ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ, ಸಂಘದ ಪದಾದಧಿಕಾರಿಗಳಾದ ಕರುಣಾಕರ, ಹನೀಪ್ ಬಂಗೇರಕಟ್ಟೆ, ಪುನೀತ್ ಮಡುವು ಸಂಘದ ಕಛೇರಿಯಲ್ಲಿ ಸಹಾಯ ಧನವನ್ನು ಮಾಡಲಾಯಿತು.

LEAVE A REPLY

Please enter your comment!
Please enter your name here