ಕೊಯ್ಯೂರು: ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘದಿಂದ ಸೀತಾಪಹಾರ ಯಕ್ಷಗಾನ ತಾಳಮದ್ದಳೆ

0

ಕೊಯ್ಯೂರು: ಶ್ರೀ ಪಂಚದುರ್ಗಾ ದೇವಸ್ಥಾನ ಕೊಯ್ಯೂರು ಇಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.22ರಂದು ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘ ಇದರ ವತಿಯಿಂದ ಸೀತಾಪಹಾರ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಪಿ.ಟಿ.ಪ್ರಸಾದ್ ಬೆಳಾಲು, ಉಮೇಶ್ ಆಚಾರ್ಯ ಕೋಡಿಯೇಲು, ಚೆಂಡೆ ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಮದ್ದಲೆ ಅನ್ವಿತ್ ವಿ.ಕೆ., ರಮೇಶ್ ಕೆ. ಸಹಕರಿಸಿದರು. ಮುಮ್ಮೇಳದಲ್ಲಿ ನಾರಾಯಣ ಭಟ್ ಬಾಸಮೆ, ರಾಮಕೃಷ್ಣ ಭಟ್ ಬದನಾಜೆ, ವಿಜಯ ಕುಮಾರ್ ಎಂ ಕೊಯ್ಯೂರು, ದಿವ ಕೊಕ್ಕಡ ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here