ಬೆಳಾಲು ಅಯ್ಯಪ್ಪ ಭಕ್ತ ವೃಂದ ರಚನೆ- ಅಧ್ಯಕ್ಷರಾಗಿ ಶ್ರೀನಿವಾಸ ಗೌಡ, ಕಾರ್ಯದರ್ಶಿಯಾಗಿ ಶಶಿಧರ ಆಚಾರ್ಯ

0

ಬೆಳಾಲು: ಬೆಳಾಲು ಶ್ರೀ ಅಯ್ಯಪ್ಪ ಭಕ್ತ ವೃಂದದ ಸಭೆ ಅ.22 ರಂದು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಶ್ರೀ ಅಯ್ಯಪ್ಪ ಭಕ್ತ ವೃಂದ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ನೋಟರಿ ವಕೀಲ ಶ್ರೀನಿವಾಸ ಗೌಡ, ಕಾರ್ಯದರ್ಶಿಯಾಗಿ ಶಿಲ್ಪಿ ಶಶಿಧರ ಆಚಾರ್ಯ ಇವರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಗೌರವ ಸಂಚಾಲಕರಾಗಿ ಗುರುಸ್ವಾಮಿಗಳಾದ ಕೇಶವ ಟೈಲರ್, ಸುಧಾಕರ ಕೊಲ್ಪಾಡಿ, ಸೀತಾರಾಮ ಬಿ.ಎಸ್., ಉಪಾಧ್ಯಕ್ಷರಾಗಿ ಬೊಮ್ಮಣ್ಣ ಗೌಡ ಗುಂಡಿಗದ್ದೆ, ಕೋಶಾಧಿಕಾರಿಯಾಗಿ ಕೃಷ್ಣ ಬನಂದೂರು, ಜತೆ ಕಾರ್ಯದರ್ಶಿಯಾಗಿ ಸೀತಾರಾಮ ಕೊರ್ದೋಟ್ಟು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹರೀಶ್ ದರ್ಖಾಸು, ವಿಶ್ವನಾಥ ಬಾಯಿತ್ಯಾರು, ಚಂದ್ರಶೇಖರ ಕುರ್ಕಿಲು, ಸಂಜೀವ ಪೂಜಾರಿ ಮಾಯ, ಮಾಧವ ಗೌಡ ಪೂರ್ಗೆತ್ತಿಲು, ಬಾಬು ಕೆರೆಕೋಡಿ, ಖಾಯಂ ಆಹ್ವಾನಿತರಾಗಿ ಹರೀಶ್ ಮುಂಡೆತ್ಯಾರು, ಗಣೇಶ್ ಅನಂತೋಡಿ, ಸತೀಶ್ ಗೌಡ ಎಳ್ಳುಗದ್ದೆ, ವಿಘ್ನಶ್ ಅನಂತೋಡಿ, ರೂಪೇಶ್ ಪೋಸೊಟ್ಟು, ಅಶೋಕ್ ಕೆ.ಎಂ ಮೇಗಿನ ಮನೆ, ಯಶೋಧರ ಅನಂತೋಡಿ, ಶಿವ ಗಣೇಶ ಭೀಮಂಡೆ, ದಿನೇಶ್ ದರ್ಖಾಸ್, ರಮೇಶ್ ಶಾಂತಿ ಗುಡ್ಡೆ ಇವರನ್ನು ಆಯ್ಕೆ ಮಾಡಲಾಯಿತು.

ಈ ವರ್ಷ ಅಯ್ಯಪ್ಪ ದೀಪೋತ್ಸವ ಜ.6ರಂದು ಅನಂತೋಡಿ ದೇವಸ್ಥಾನದ ವಠಾರದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here