ವಸಂತ ಬಂಗೇರರ ಅಭಿಮಾನಿಗಳಿಂದ ರಾಕೇಶ್ ಶೆಟ್ಟಿ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲು

0

ಧರ್ಮಸ್ಥಳ: ಕಾರ್ಕಳದಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ, ಸ್ವಾಮೀಜಿಗಳು ಮತ್ತು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ವಿನಾ ಕಾರಣ ಮಾನ ಹಾನಿ ಮತ್ತು ವೈಯಕ್ತಿಕ ತೇಜೋವದೆ ಮಾಡಿ ಮಾತಾಡಿದ ಹಾಗೂ ಜೀವ ಬೆದರಿಕೆ ಒಡ್ಡಿದ ಪವರ್ ಟಿ.ವಿ ಯ ವ್ಯವಸ್ಥಾಪಕ ರಾಕೇಶ್ ಶೆಟ್ಟಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೆ.ವಸಂತ ಬಂಗೇರ ಅಭಿಮಾನಿಗಳು ದೂರು ದಾಖಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಗ್ರೇಸಿಯನ್ ವೇಗಸ್, ಜಿ.ಪ.ಮಾಜಿ‌ ಸದಸ್ಯೆ ನಮಿತಾ , ಸಿಪಿಐಎಂ ನಾಯಕ ಬಿ.ಎಂ.ಭಟ್, ಸಂಜೀವ ನಾಯ್ಕ, ಕಾಂಗ್ರೇಸ್ ಮುಖಂಡರುಗಳಾದ ಪಿ.ಟಿ.ಸಭಾಸ್ಟೀನ್ ಕಾಯರ್ತಡ್ಕ, ಅಶ್ರಫ್ ನೆರಿಯ, ತುಕರಾಮ ಗೌಡ ಪಾಂಗಳ ಧರ್ಮಸ್ಥಳ, ಶ್ರೀಧರ ಪೂಜಾರಿ ಉಜಿರೆ, ತುಕರಾಮ ರೆಖ್ಯ, ಬೊಮ್ಮಣ್ಣ ಗೌಡ ಪುದುವೆಟ್ಟು, ದಯಾನಂದ ಬೆಳಾಲು, ರಾಯಿ ಪುದುವೆಟ್ಟು, ಸುನೀಲ್ ಕಲ್ಮಂಜ, ಪದ್ಮ ಪೂಜಾರಿ ಕಲ್ಮಂಜ, ದಯಾನಂದ ಶೆಟ್ಟಿ ಕಲ್ಮಂಜ, ಸುಕುಮಾರ್ ಫುದುವೆಟ್ಟು, ಸಿದ್ದಿಕ್ ಅಜಿಕುರಿ, ವಿಜಯಲಕ್ಷ್ಮಿ ನಿಡ್ಲೆ, ರಮಾನಂದ‌ ಶೆಟ್ಟಿ ಧರ್ಮಸ್ಥಳ , ನಿರಂಜನ ಕಾಯರ್ತಡ್ಕ ಮೊದಲಾದ ವಸಂತ ಬಂಗೇರರ ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here