ತಾಲೂಕಿನ ತಣ್ಣೀರುಪಂತ, ಶಿಲಾ೯ಲು, ಕಣಿಯೂರು, ಉಜಿರೆ, ಪಟ್ರಮೆ ಮತ್ತು ಬಾರ್ಯ ಗ್ರಾ.ಪಂ ಗಳ ಪಿಡಿಓ ವರ್ಗಾವಣೆ

0

ಬೆಳ್ತಂಗಡಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೈಸೂರು ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯ ವಿವಿಧ ವೃಂದದ ನೌಕರರುಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಮೂದಿಸಿರುವ ಹುದ್ದೆ ಮತ್ತು ಸ್ಥಳಕ್ಕೆ ವರ್ಗಾಯಿಸಿ, ನಿಯೋಜಸಿ ಆದೇಶಿಸಿದೆ

ತಣ್ಣೀರುಪಂತ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ವೈ ಎನ್ ರವರು ಮಳೂರು ಪಟ್ಟಣ ಗ್ರಾಮ ಪಂಚಾಯತ್ ಚೆನ್ನಪಟ್ಟಣಕ್ಕೆ, ಶಿರ್ಲಾಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜು ಉಜಿರೆ ಗ್ರಾ.ಪಂ.ಗೆ, ಕಣಿಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ ರವರು ಅಳದಂಗಡಿ ಗ್ರಾ.ಪಂ ಗೆ, ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚರವರು ಸುಳ್ಯ ಅಲೆಟ್ಟಿ ಗ್ರಾ.ಪಂಚಾಯತ್ ಗೆ, ಪಟ್ರಮೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಿತೇಶ್.ಎನ್ ಪುತ್ರನ್ ಮಡಮಕ್ಕಿ ಗ್ರಾ.ಪಂ ಹೆಬ್ರಿ ತಾಲೂಕಿಗೆ, ಬಾರ್ಯ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಶೀಲಾ ರವರು ಶಿರ್ಲಾಲು ಗ್ರಾ.ಪಂ ಗೆ, ವರ್ಗಾಹಿಸಲಾಗಿದೆ.

LEAVE A REPLY

Please enter your comment!
Please enter your name here