ಬೆಳ್ತಂಗಡಿ: ಒಂದೇ ದಿನದಲ್ಲಿ 112 ಜೀವ ವಿಮಾ ಪಾಲಿಸಿ ಮಾಡಿ ಒನ್ ಡೇ ಸೆಂಚುರಿಯನ್ ಸಾಧನೆ ಮಾಡಿದ ನಿತ್ಯಾನಂದ ನಾವರ

0

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಮಂಗಳೂರು ಶಾಖೆ 1 ರ ಸೀನಿಯರ್ ಬ್ಯುಸಿನೆಸ್ ಅಸೋಸಿಯೇಟ್ ಕೃಷ್ಣ ಎಂ ಹೆಗಡೆಯವರ ಯೂನಿಟಿನ ಪ್ರತಿನಿಧಿಯಾಗಿರುವ ನಿತ್ಯಾನಂದ ನಾವರ ಇವರು ಒಂದೇ ದಿನದಲ್ಲಿ 112 ಜೀವ ವಿಮಾ ಪಾಲಿಸಿಗಳನ್ನು ಮಾಡಿ ಒನ್ ಡೇ ಸೆಂಚುರಿಯನ್ ಎಂಬ ಸಾಧನೆಯನ್ನು ಈ ಆರ್ಥಿಕ ವರ್ಷದಲ್ಲಿ ಉಡುಪಿ ವಿಭಾಗದಲ್ಲೇ ಪ್ರಥಮವಾಗಿ ಮಾಡಿರುತ್ತಾರೆ.

ಉಜಿರೆಯಲ್ಲಿ ಎನ್.ಎನ್.ಬಾಟಲಿಂಗ್ ಕಂಪನಿ ಎಂಬ ಉದ್ಯಮವನ್ನು ನಡೆಸುತ್ತಿರುವ ಇವರು ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಮಾಜಿ ಪ್ರಾಂತ್ಯ ಅಧ್ಯಕ್ಷರಾಗಿದ್ದು ಪ್ರಸ್ತುತ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಡಾಕ್ಟರ್ ಮೇಲ್ವಿನ್ ಡಿಸೋಜಾ ರವರ ಸಂಪುಟದಲ್ಲಿ ಜಿಎಸ್‌ಟಿ ಸಹ ಕೋಆರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿತ್ಯಾನಂದ ನಾವರ ಇವರು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ನಾರಾವಿ ವಲಯದ ಅಧ್ಯಕ್ಷರಾಗಿ, ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಮಾಜಿ ಕೋಶಾಧಿಕಾರಿಯಾಗಿ, ಯುವವಾಹಿನಿ ಬೆಳ್ತಂಗಡಿ ಘಟಕ ಇದರ ಗೌರವ ಸಲಹೆಗಾರರಾಗಿ ಹಲವಾರು ಸಮಾಜ ಮುಖಿ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here