ಉಜಿರೆ ಎಸ್.ಡಿ.ಎಂ.ಟ್ರಸ್ಟ್ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ.ವೈ. ಹೃದಯಾಘಾತಕ್ಕೆ ಬಲಿ

0

ಉಜಿರೆ: ಉಜಿರೆಯ ಎಸ್.ಡಿ.ಎಂ. ಟ್ರಸ್ಟ್ ಕಾರ್ಯನಿರ್ವಹಣಾಧಿಕಾರಿ ಹರೀಶ್ ಎಂ.ವೈ.‌(63ವ)ಹೃದಯಾಘಾತಕ್ಕೀಡಾಗಿ ಸೆ.23ರಂದು ನಿಧನರಾಗಿದ್ದಾರೆ. ಇವರು 2 ವರ್ಷದಿಂದ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸುರತ್ಕಲ್ ನಿವಾಸಿಯಾಗಿದ್ದ ಮೃತರು ಕೆನರಾ ಬ್ಯಾಂಕ್ ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು.

ಬಳಿಕ ಎಸ್.ಡಿ.ಎಂ. ಟ್ರಸ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.‌

LEAVE A REPLY

Please enter your comment!
Please enter your name here