ಪೆರ್ಲ ಬೈಪಾಡಿ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ

0

ಬಂದಾರು: ಪೆರ್ಲಬೈಪಾಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ಕಾರ್ಯಕ್ರಮ ಸೆ.7 ಮತ್ತು 8 ರಂದು ಬ್ರಹ್ಮಶ್ರೀ ವೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನೀಲೇಶ್ವರ ಜಗದೀಶ ಜೋಯಿಸರ ನೇತೃತ್ವದಲ್ಲಿ ದೇವಸ್ಥಾನದ ವಠಾರದಲ್ಲಿ ಜರುಗಿತು.

ಕಳೆದ 12 ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿದ್ದು ಮುಂದಿನ ವರ್ಷ ಪುನರ್ ಪ್ರತಿಷ್ಠಾ ಅಷ್ಟಬಂಧ ನಡೆಯಲಿದ್ದು, ಇದರ ಅಂಗವಾಗಿ ಪ್ರಶ್ನಾಚಿಂತನೆ ನಡೆಯಿತು.
ಪ್ರಸಾದ್ ಜೋತಿಷ್ಯ ಅನುವಾದಕರು, ಅನಂತೋಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತರಾಮ ಶಬರಾಯ, ಸ್ಥಳೀಯ ಜೋತಿಷ್ಯರಾದ ಸತ್ಯ ಶಂಕರ ಮಯ್ಯಬೈಪಾಡಿ ದೇವಸ್ಥಾನದ ಅರ್ಚಕರಾದ ಪ್ರಶಾಂತ್ ಹೊಳ್ಳ ಉಪಸ್ಥಿತರಿದ್ದು ಸಹಕರಿಸಿದರು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಕುಕ್ಕಪ್ಪ ಗೌಡ ತಾರೆಕೆರೆ,ಅಡಳಿತ ಮಂಡಳಿ ಅಧ್ಯಯ ರಮೇಶ್ ಗೌಡ ಅಡ್ಡಾರು,ಕಾರ್ಯದರ್ಶಿ ಉಮೇಶ್ ಗೌಡ ಎ,ಸದಸ್ಯರಾದ ರಮೇಶ್ ಗೌಡ ಅಡ್ರೆಂಕಿಮಜಲು, ದೇಜಪ್ಪ ಗೌಡ ಪಯ್ಯಾಡಿ, ಲಕ್ಷ್ಮೀಕಾಂತ ಕೀಲಾರು, ದಿನೇಶ್ ನಾಯ್ಕ, ಭಾರತಿ ಬಾಲಂಪಾಡಿ, ಯಶೋಧ ಅಡ್ಡಾರು, ಹರೀಶ್ ಗೌಡ ಕೋಡಿಮಜಲು, ನಿರ್ಮಲ್ ಕುಮಾರ್, ಮೋನಪ್ಪ ಗೌಡ ನೆಲ್ಲಿಂಗೆರು, ಮಾಜಿ ಅಧ್ಯಕ್ಷ ಹೊನ್ನಪ್ಪ ಗೌಡ ಸೋನಕುಮೇರು, ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೇಶವ ಗೌಡ ಕೊಂಗುಜೆ, ಹಿರಿಯರಾದ ಧರ್ಣಪ್ಪ ಗೌಡ ಬಾನಡ್ಕ, ಹೊನ್ನಪ್ಪ ಗೌಡ ಸೋನಕುಮೇರು, ಭಜನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಗೌಡ ಪಲಸದಕೋಡಿ, ರಾಜೀವಿ ಮಹಿಳಾ ಸಮಿತಿ ಸದಸ್ಯೆ, ಭಜನಾ ಮಂಡಳಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here