ಸಿಂಡಿಕೇಟ್ ಬ್ಯಾಂಕ್ ನಿವೃತ್ತ ವಿಭಾಗೀಯ ಪ್ರಬಂಧಕ ಸೋಮನಾಥ ಭಟ್ ಪಟವರ್ಧನ್ ನಿಧನ

0

ಬೆಳ್ತಂಗಡಿ: ಪಟ್ಟಣದ ಕುತ್ಯಾರು ನಿವಾಸಿ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ವಿಭಾಗೀಯ ಪ್ರಬಂಧಕ ಸೋಮನಾಥ ಭಟ್ ಪಟವರ್ಧನ್ (87) ಸೆ.6 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ತಮ್ಮ ಕರ್ತವ್ಯದ ಅವಧಿಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಕೇಂದ್ರ ಕಚೇರಿ ಸೇರಿದಂತೆ ನಾನಾಕಡೆ ಸೇವೆ ಸಲ್ಲಿಸಿದ್ದರು.ಅವರು ಬೆಳ್ತಂಗಡಿ ಚಿತ್ಪಾವನ ಸಂಘದ ಗೌರವಾಧ್ಯಕ್ಷರಾಗಿ, ಕಾರ್ಕಳ ಚಿತ್ಪಾವನ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಹವ್ಯಾಸಿ ಬರಹಗಾರರಾಗಿದ್ದರು.

ಮೃತರು ಪತ್ನಿ, ಬೆಳ್ತಂಗಡಿಯ ಉದ್ಯಮಿ ಯಶವಂತ ಪಟವರ್ಧನ್‌ ಸಹಿತ ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here