ಭಾಸ್ಕರ್ ನಾಯ್ಕ್ ಹಲ್ಲೆ ಪ್ರಕರಣ-ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಜನರ ಮೇಲೆ ಹಲ್ಲೆ, ಜಾತಿನಿಂದನೆ ದೂರು ದಾಖಲು-ಪೊಲೀಸರಿಂದ ತನಿಖೆ

0

ಉಜಿರೆ: ಉಜಿರೆ ಗ್ರಾಮದ ಬಡೆಕೊಟ್ಟು ನಿವಾಸಿ ಭಾಸ್ಕರ ನಾಯ್ಕ ಎಂವವರು ಸಪ್ಟೆಂಬರ್ 2ರಂದು ಖಾಸಗಿ ಯೂ ಟ್ಯೂಬ್ ಚಾನೆಲ್ ವೊಂದಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಂದರ್ಶನ ನೀಡಿ ವಾಪಾಸಾಗುತ್ತಿದ್ದಾಗ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಪ್ರಕರಣದಲ್ಲಿ ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಸಂಬಂಧ ಐಪಿಎಸ್ ಸೆಕ್ಷನ್ 1860 (143,147,148,341,342,354,324,504,506,149 ನಡಿ ಕೇಸ್ ದಾಖಲಿಸಲಾಗಿದೆ.

ದೂರಿನಲ್ಲಿ ಏನಿದೆ? ವಿವರ:
ಭಾಸ್ಕರ ನಾಯ್ಕರು ಶನಿವಾರ ಮಂಗಳೂರಿನಲ್ಲಿ ಯೂಟ್ಯೂಬ್ ವಾಹಿನಿಗೆ ಸಂದರ್ಶನ ನೀಡಿ ತನ್ನ ಮನೆಗೆ ಹಿಂದೆ ಬರುವಾಗ ಸಂಜೆ ಸುಮಾರು 5 ಗಂಟೆಗೆ ಉಜಿರೆ ಗ್ರಾಮದ ಪಾಣೆಯಾಲು ಎಂಬಲ್ಲಿ ತಲುಪಿದಾಗ ಆರೋಪಿಗಳಾದ ಮಹೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ ಪಾಣಿಯಾಲು, ಮುಖೇಶ್ ಶೆಟ್ಟಿ, ಪ್ರಜ್ವಲ್ ಗೌಡ ಕೆ.ವಿ, ನೀತು ಶೆಟ್ಟಿ, ಪ್ರಮೋದ್ ಶೆಟ್ಟಿ ಪಾಣಿಯಾಲು ಮತ್ತು ಇತರರು ಕಾರಿನಲ್ಲಿ ಬಂದು ಎಲ್ಲರೂ ಕಾರಿನಿಂದ ಇಳಿದು ಭಾಸ್ಕರ ನಾಯ್ಕರನ್ನು ತಡೆದು “ಬೇವಾರ್ಸಿ’’ ಮೊದಲಾದ ಅವಾಚ್ಯ ಶಬ್ದಗಳಿಂದ ಬೈದು, ಕೀಳು ಜಾತಿಗೆ ಹುಟ್ಟಿದ……ಎಂದು ಜಾತಿ ನಿಂದನೆ ಮಾಡಿದ್ದಾಗಿ ಹಾಗೂ ನಿನ್ನನ್ನು ಹೀಗೆ ಬಿಟ್ಟರೆ ತುಂಬಾ ಹಾರಾಡುತ್ತೀಯಾ ಎಂದು ಹೇಳಿದ ಬಳಿಕ ಭಾಸ್ಕರ್ ನಾಯ್ಕರನ್ನು ಲೈಟ್‌ಕಂಬಕ್ಕೆ ಕಟ್ಟಿ ಹಾಕಿ ಮುಷ್ಟಿ ಗಾತ್ರದ ಕಲ್ಲುಗಳಿಂದ ಬೆನ್ನಿಗೆ, ಎದೆಗೆ, ಮುಖಕ್ಕೆ ಮತ್ತು ಕಾಲಿಗೆ ನೋವುಂಟು ಮಾಡಿದ್ದಾರೆ. ಆಗ ಭಾಸ್ಕರ ನಾಯ್ಕರ ಜೋರಾದ ಬೊಬ್ಬೆ ಕೇಳಿ ಹತ್ತಿರದಲ್ಲೇ ಇದ್ದ ಮನೆಯಿಂದ ಅವರ ಹೆಂಡತಿ ಮಮತಾ ಓಡಿ ಬಂದು ಭಾಸ್ಕರ ನಾಯ್ಕರನ್ನು ಬಿಡಿಸಿ ಎಬ್ಬಿಸಿದಾಗ ಪ್ರಮೋದ್ ಶೆಟ್ಟಿ ಭಾಸ್ಕರ್ ನಾಯ್ಕರ ಹೆಂಡತಿಯ ಎಡಕಾಲಿನ ತೊಡೆಗೆ ಕಲ್ಲಿನಿಂದ ಹೊಡೆದಾಗ ಇಬ್ಬರೂ ಜೋರಾಗಿ ಬೊಬ್ಬೆ ಹಾಕಿದರು.
ಆಗ ಅಲ್ಲಿಗೆ ಬಂದ ಪರಿಚಿತರಾದ ಜಯಪ್ರಕಾಶ್ ಶೆಟ್ಟಿ, ಶಂಕರ ಶೆಟ್ಟಿ, ತಿಮರೋಡಿ ಸುರೇಶ್ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಹಲ್ಲೆಗೆ ಬಳಸಿದ್ದ ಕಲ್ಲನ್ನು ಅಲ್ಲೇ ಬಿಸಾಡಿ ನಿನ್ನನ್ನು ಹೀಗೆ ಜೀವಸಹಿತ ಇರಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here