ಬೆಳ್ತಂಗಡಿ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಭೇಟಿ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರ ಜನ್ಮ ದಿನದ ಪ್ರಯುಕ್ತ ಧರ್ಮಾಧ್ಯಕ್ಷರ ನಿವಾಸದಲ್ಲಿ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ ಇದರ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರುವರು ಭೇಟಿ ನೀಡಿ ಜನ್ಮ ದಿನದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಸಂಘದ ಧಾರ್ಮಿಕ ನಿಧಿಯಿಂದ ರೂ. ಒಂದು ಲಕ್ಷದ ಚೆಕ್‌ನ್ನು ಧರ್ಮಪ್ರಾಂತ್ಯದ ಧರ್ಮಗುರುಗಳ ವಸತಿ ನಿಲಯದ ನಿರ್ಮಾಣಕ್ಕಾಗಿ ಸಂಘದ ಅಧ್ಯಕ್ಷರಾದ ಅನಿಲ್ ಎ.ಜೆ ರವರು ಪರಮ ಪೂಜ್ಯ ಅತೀ ವಂದನೀಯ ಧರ್ಮಾಧ್ಯಕ್ಷರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಜಾರ್ಜ್ ಎಂ.ವಿ, ನಿರ್ದೇಶಕರುಗಳಾದ ಸೆಬಾಸ್ಟಿನ್ ವಿ.ಟಿ, ಆಂಟನಿ ಕೆ.ಡಿ, ಬಾಬು ತೋಮಸ್, ಜ್ಯೆಸನ್ ಪಿ.ಎಸ್, ಬಿಜು ಪಿ.ಪಿ, ಸೋಫಿ ಜೋಸೆಫ್, ಫಿಲೋಮೀನಾ ವಿ, ಬಿಜು ಎಮ್.ಜೆ, ಸೆಬಾಸ್ಟಿನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಮನೋಜ್ ಪಿ.ಎ ಹಾಗೂ ಸಿಬ್ಬಂದಿಗಳಾದ ರೇಷ್ಮಾ ಅಬ್ರಾಹಂ, ಮ್ಯಾಥ್ಯು ಕೆ.ಕೆ, ಆಲ್ವಿನ್ ಆಂಟನಿ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here