ದೊಂಡೋಲೆ ಮನೆತನದ ಹಿರಿಮಗಳು ಯಶೋಧ ರಾವ್ ನಿಧನ-ಶ್ರೀರಸ್ತು ಶುಭಮಸ್ತು ಮಾಧವ ಖ್ಯಾತಿಯ ಅಜಿತ್ ಹಂದೆಗೆ ಮಾತೃವಿಯೋಗ

0

ಬೆಂಗಳೂರು: ಧರ್ಮಸ್ಥಳ ದೊಂಡೋಲೆ ಮನೆಯ ದಿವಂಗತ ಕೆ.ಸೂರ್ಯನಾರಾಯಣ ರಾವ್ ರವರ ಹಿರಿಯ ಪುತ್ರಿ ಯಶೋದ ರಾಮಚಂದ್ರರಾವ್ ( 82ವ) ಇಂದು ಬೆಳಗ್ಗೆ ಬೆಂಗಳೂರಿನ ಯಲಹಂಕದಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಯಶೋದರವರು, ಭಜನೆಯ ಮೂಲಕ ದೇವರ ಆರಾಧನೆಯಲ್ಲಿ ಖ್ಯಾತಿ ಪಡೆದಿದ್ದರು.ಇವರು ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ.

ಇವರು ಸಹೋದರರಾದ ಕೆ.ಶಂಕರರಾಮರಾವ್ ದೊಂಡೋಲೆ, ಅನಂತ ರಾವ್ ಚಾರ್ಮಾಡಿ, ಪುರಂದರ ರಾವ್ ದೊಂಡೋಲೆ,ರವೀಂದ್ರ ರಾವ್ ಬೆಂಗಳೂರು, ಸಹೋದರಿಯರಾದ ಅರುಣ್ ಎಸ್ ಐತಾಳ್,ಗಾಯತ್ರಿ ತಾಳಿತ್ತಾಯ,ವಾಣಿ ಪಿಸಿಎನ್ ರಾವ್ ಮತ್ತು ಮಕ್ಕಳಾದ ಅರವಿಂದ್ ರಾವ್, ಅಶೋಕ್ ರಾವ್, ಅನಿಲ್ ರಾವ್ ಮತ್ತು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯ ಮಾಧವ ಪಾತ್ರಧಾರಿ ಅಜಿತ್ ಹಂದೆಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here