ನಿಟ್ಟಡೆ: ಕ್ಲಸ್ಟರ್ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಕುಂಭಶ್ರೀ ಶಾಲೆಗೆ ಪ್ರಶಸ್ತಿ

0

ನಿಟ್ಟಡೆ: 2023- 24 ನೇ ಸಾಲಿನ ನಾರಾವಿ ಕ್ಲಸ್ಟರ್ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ದೇ ಪೆರಿಂಜೆ ಶ್ರೀ ಧರ್ಮಸ್ಥಳ ಅನುದಾನಿತ ಪ್ರೌಢ ಶಾಲೆಯಲ್ಲಿ ನಡೆಯಿತು.

ನಿಟ್ಟಡೆ ಕುಂಭಶ್ರೀ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮುಹಾದ್ ಮತ್ತು ಬಳಗ ಕವ್ವಾಲಿ ಪ್ರಥಮ ಸ್ಥಾನ, 9ನೇ ತರಗತಿ ಸಂಚಿಕ ಸಿ. ಶೆಟ್ಟಿ ಭರತನಾಟ್ಯ- ದ್ವಿತೀಯ ಸ್ಥಾನ, 9ನೇ ತರಗತಿಯ ಸುಚನ್ ಮಾರುಪುಡಿ ಮಿಮಿಕ್ರಿ- ತೃತೀಯ ಸ್ಥಾನ, ಹತ್ತನೇ ತರಗತಿಯ ಹರ್ಷಿತ ಫೆರ್ನಾಂಡಿಸ್ ಹಿಂದಿ ಭಾಷಣ – ತೃತೀಯ ಸ್ಥಾನ ಪಡೆದಿರುತ್ತಾರೆ.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಉಷಾ ಜಿ ಮತ್ತು ಪ್ರೌಢಶಾಲಾ ಶಿಕ್ಷಕರಾದ ಗೌತಮಿ , ರೂಪಲತಾ ಪೂರ್ವ ಪ್ರಾರ್ಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್. ಎನ್.ರಾವ್ ಸಹಕರಿಸಿದರು.

ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಗಿರೀಶ್ ಕೆ.ಎಚ್., ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಅಶ್ವಿತ್ ಕುಲಾಲ್ ಅಭಿನಂದಿಸಿದರು.

LEAVE A REPLY

Please enter your comment!
Please enter your name here