ಸೂಳಬೆಟ್ಟು ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 2024 ರಲ್ಲಿ ಬ್ರಹ್ಮಕಲಶೋತ್ಸವ

0

ಅಳದಂಗಡಿ: ಸೂಳಬೆಟ್ಟು ಬರಯ ಶ್ರೀಗೋಪಾಲಕೃಷ್ಣ ದೇವರಿಗೆ 2024ರಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಸಂಕಲ್ಪಿಸಲಾಗಿದ್ದು ಅದರ ಯಶಸ್ಸಿಗಾಗಿ ಪೂರ್ವಭಾವಿಯಾಗಿ ಆ.23 ರಂದು ಪ್ರಾರ್ಥನೆ ಸಲ್ಲಿಸಲಾಯಿತು.
ಅಳದಂಗಡಿ ಅರಮನೆ ಡಾ ಪದ್ಮಪ್ರಸಾದ ಅಜಿಲ ಅವರು ಬ್ರಹ್ಮಕಲಶೋತ್ಸವಕ್ಕೆ ಸಮ್ಮತಿ ಸೂಚಿಸಿ, ಶುಭ ಹಾರೈಸಿದರು.

ಬಳಿಕ ದೈವಜ್ಞರ ಮೂಲಕ ಆರೂಢ ಪ್ರಶ್ನೆ ನೆರವೇರಿಸುವುದು, ನಂತರ ದಿನಾಂಕ‌ ನಿಶ್ಚಯಿಸುವುದೆಂದು ನಿರ್ಧರಿಸಲಾಯಿತು.

ಈ ಸಂದರ್ಭ ತಂತ್ರಿಗಳಾದ ಸೀತಾರಾಮ ಕೇಳ್ಕರ್, ಸಂತೋಷ್ ಕೇಳ್ಕರ್, ದೇವಾಲಯದ ಮೊಕ್ತೇಸರ ಸದಾನಂದ ಸಹಸ್ರಬುದ್ದ್ಯೆ, ಸಹ ಮೊಕ್ತೇಸರರಾದ ಪ್ರಭಾಕರ ಆಠವಳೆ, ಪದ್ಮನಾಭ ನಾತು, ದಯಾನಂದ ನಾತು, ಗಜಾನನ ನಾತು, ಪುರುಷೋತ್ತಮ ತಾಮ್ಹನ್‌ಕಾರ್, ಅರ್ಚಕ ಭಾರ್ಗವ ಮರಾಠೆ, ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ಅಧ್ಯಕ್ಷ ತ್ರಿವಿಕ್ರಮ ಕೇಳ್ಕರ್ ಹಾಗೂ ಸೂಳಬೆಟ್ಟು, ಕುದ್ಯಾಡಿ, ಸುಲ್ಕೇರಿ, ಸವಣಾಲು, ಕಾಜಿಮುಗೇರು, ಫಂಡಿಜೆ ವಾಳ್ಯದ ಭಜಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here