ಪಟ್ರಮೆ ದಡಂತಮಲೆ ಅರಣ್ಯದಲ್ಲಿ ಕಡವೆ ಬೇಟೆ ಪ್ರಕರಣ: ನಾಲ್ವರ ಬಂಧನ, ನ್ಯಾಯಾಲಯಕ್ಕೆ ಹಾಜರು

0

ಪಟ್ರಮೆ: ಇಲ್ಲಿಯ ದಡಂತಮಲೆ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿ ಕೊಂದ ಪ್ರಕರಣದಲ್ಲಿ ನಾಲ್ವರನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಆಗಸ್ಟ್ 23ರಂದು ನಡೆದಿದೆ.
ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಕೊಟ್ಯಪ್ಪಗೌಡ, ಪುನೀತ್ ಮಣಿಯೇರು, ಲೋಕೇಶ್ ಸಂಕೇಶ, ಎಸ್. ಜೆ. ಸುದೇಶ ಸಂಕೇಶ ಎನ್ನಲಾಗಿದೆ.

ಬಂಧಿತ ಆರೋಪಿಗಳಿಂದ ಕಡವೆಯ ಮೃತ ದೇಹ ಮತ್ತು ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಕೋವಿಯನ್ನು ವಶಕ್ಕೆ ಪಡೆಯಲಾಗಿದೆ.


ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ರವರಿಗೆ ಕೆಲವೊಂದು ಮೂಲಗಳಿಂದ ಮಾಹಿತಿ ದೊರೆತಿದ್ದು ತಕ್ಷಣವೆ ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್, ಅಶೋಕ್, ರಾವುತಪ್ಪ ಬಿರಾದಾರ್, ಅರಣ್ಯಾಧಿಕಾರಿ ವಿನಯ ಚಂದ್ರ, ಪ್ರಶಾಂತ್, ವಾಹನ ಚಾಲಕ ರೆಖ್ಯ ನಿವಾಸಿ ಕಿಶೋರ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here