ಕಣಿಯೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಾಲು ನಿಂತಿರುವ ನಾಗರಿಕರು- ಪಡಿತರ ಚೀಟಿ ಸರ್ವರ್ ಓಫನಾಗುತ್ತಿಲ್ಲ ಪರದಾಡುತ್ತಿರುವ ನಾಗರಿಕರು

0

ಕಣಿಯೂರು: ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶದ ಪ್ರಕಾರ ಅ 18 ರಿಂದ 21ತನಕ ಪಡಿತರ ಚೀಟಿ ಸೇರ್ಪಡೆ ಬೇರ್ಪಡೆ ತಿದ್ದುಪಡಿಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಅಪರಾಹ್ನ ಗಂಟೆ 12 ರಿಂದ 4 ರವರೆಗೆ ಮಾತ್ರ ಅವಕಾಶ ನೀಡಿದ್ದು, ಕೇವಲ ನಾಲ್ಕು ದಿನ ಮಾತ್ರ ದಿನಕ್ಕೆ ನಾಲ್ಕು ಗಂಟೆಯಂತೆ ಅವಕಾಶ ನೀಡಿದ್ದು ದಿನಾಂಕ 18 ಮತ್ತು 19 ಎರಡು ದಿನವೂ ಸೈಬರ್ ಹಾಗೂ ಗ್ರಾಮ ಪಂಚಾಯತ್ ಗಳಲ್ಲಿ ಸರ್ವರ್ ಓಪನ್ ಆಗಲಿಲ್ಲ.ಪಡಿತರ ಚೀಟಿ ಸೇರ್ಪಡೆ ಬೇರ್ಪಡೆ ತಿದ್ದುಪಡಿಗಾಗಿ ಜನ ಪರದಾಡುತ್ತಿರುವುದು ಕಂಡು ಬರುತ್ತದೆ.ಸಂಭದಿಸಿದ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here