ನ್ಯಾಯತರ್ಪು ಒಕ್ಕೂಟದ ಸಂಘದ ತ್ರೈಮಾಸಿಕ ಸಭೆ

0

ನ್ಯಾಯತರ್ಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನ್ಯಾಯತರ್ಪು ಒಕ್ಕೂಟದ ತ್ರೈಮಾಸಿಕ ಸಭೆ ಆ.13 ರಂದು ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯ ಮೇಲ್ವಿಚಾರಕ ಹರೀಶ್ ಗೌಡ, ಕೃಷಿ ಅಧಿಕಾರಿ ರಾಮ್ ಕುಮಾರ್, ಪದಾಧಿಕಾರಿಗಳಾದ ಸಂಧ್ಯಾ, ಶಶಿಕಲಾ, ವಿಜಯ ಹಾಗೂ ನ್ಯಾಯತರ್ಪು ಸೇವಾ ಪ್ರತಿನಿಧಿ ವಿನೋದ ವೇದಿಕೆಯಲ್ಲಿ ಉಪಸ್ಥಿತರಿದ್ದು,ಸಂಘದ ಬೆಳವಣಿಗೆ ಹಾಗೂ ಸಾಲ ಪಡೆಯುವ ಮತ್ತು ಸಾಲ ಸಂದಾಯದ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಉಸ್ತುವಾರಿ ಜವಾಬ್ದಾರಿಯನ್ನು ಮುದ್ದುಂಜ ಮತ್ತು ರಕ್ತೇಶ್ವರಿ ಪದವು ತಂಡದ ಸದಸ್ಯರು ನೇತೃತ್ವದಲ್ಲಿ ವಹಿಸಿದ್ದರು.ಸಂಘದ ಸದಸ್ಯರು ಬಾಗವಹಿಸಿದರು.

LEAVE A REPLY

Please enter your comment!
Please enter your name here