ತುಳುನಾಡ್ ಒಕ್ಕೂಟದ ವತಿಯಿಂದ ಚೆನ್ನೆಮಣೆ ಗೊಬ್ಬು

0

ಬೆಳ್ತಂಗಡಿ : ತುಳುನಾಡ್ ಒಕ್ಕೂಟ ಸಂಘಟನೆಯ ನೇತೃತ್ವದಲ್ಲಿ ಆ.13ರಂದು ಚೆನ್ನೆಮಣೆ ಗೊಬ್ಬುದ ಸ್ಪರ್ಧೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್. ಜೆ. ಕಾರ್ಯಕ್ರಮವನ್ನು ಚೆನ್ನೆಮಣೆಗೆ ಕಾಯಿ ಹಾಕುವ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ತುಳುನಾಡ್ ಒಕ್ಕೂಟದ ಅಧ್ಯಕ್ಷ ಶೇಖರ್ ಗೌ0ಡತಿಗೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ನೋಟರಿ ವಕೀಲ ಬಿ. ಮುರಳಿ, ಯುವವಾಹಿನಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಎಂ. ಕೆ. ಪ್ರಸಾದ್, ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏನಿಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ತುಳುನಾಡ್ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸ್ಪರ್ಧಿಗಳು ಹಾಜರಿದ್ದರು, ಬಳಿಕ ಚೆನ್ನೆಮಣೆ ಸ್ಪರ್ಧೆ ನಡೆಯಿತು.ಒಕ್ಕೂಟದ ಕಾನೂನು ಸಲಹೆಗಾರ ಹರೀಶ್ ಸ್ವಾಗತಿಸಿ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here