ಮಡಂತ್ಯಾರು ರೋಟರಿ ಕ್ಲಬ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಹೂಡಿಕೆದಾರರ ವಿಚಾರ ಸಂಕಿರಣ

0

ಉಜಿರೆ: ನಮ್ಮ ನಡೆ-ಆರ್ಥಿಕ ಸಾಕ್ಷರತೆ ಕಡೆ ಎಂಬ ಜಿಲ್ಲಾ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಮಡಂತ್ಯಾರ್ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಜಂಟಿಯಾಗಿ ಹೆಚ್. ಡಿ. ಎಫ್. ಸಿ. ಮ್ಯೂಚ್ ವಲ್ ಫಂಡ್ ನ ಸಹಯೋಗದೊಂದಿಗೆ ಹೂಡಿಕೆದಾರರ ವಿಚಾರ ಸಂಕಿರಣ ಕಾರ್ಯಕ್ರಮವು ಆ.11ರಂದು ಉಜಿರೆಯ ಒಶಿಯನ್ ಪರ್ಲ್ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.ಡಾ.ಬಾಲಾಜಿ ರಾವ್ ಡಿ.ಜಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಾರ್ವಜನಿಕರಿಗೆ ಆರ್ಥಿಕತೆ ಮತ್ತು ಹೂಡಿಕೆಯ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಮಡಂತ್ಯಾರ್ ರೋಟರಿ ಕ್ಲಬ್ ಅಧ್ಯಕ್ಷ ರೋ.ಶ್ರೀಧರ ರಾವ್ ಸರಸ ಪಾರೆಂಕಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ.ಅನಂತ್ ಭಟ್ ಮಚ್ಚಿಮಲೆ, ಇನ್ನೊಬ್ಬ ತರಬೇತುದಾರ ವಿಜಯ ಪ್ರಭು, ಮಡಂತ್ಯಾರ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು, ಗಣ್ಯರಾದ ಮುಖ್ಯವಾಗಿ ಉಜಿರೆ ಶ್ರೀ ಜನಾರ್ಧನ ದೇವಸ್ಥಾನ ಆಡಳಿತ ಮೊಕ್ತೇಸರ ರೋ.ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಸದಸ್ಯ ರೋ.ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here