ಹನುಮಾನ್ ನಗರ ಬೊಳ್ಳುಕಲ್ಲು ವತಿಯಿಂದ ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ಚಾಲಿಸ್ ಪುಸ್ತಕ ವಿತರಣೆ

0

ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಹನುಮಾನ್ ನಗರ ಬೊಳ್ಳುಕಲ್ಲು ಮಂಡಳಿಯ ವತಿಯಿಂದ ಬೊಳ್ಳುಕಲ್ಲು ಪರಿಸರದ ಪ್ರತೀ ಹಿಂದೂ ಮನೆಗೆ ಉಚಿತವಾಗಿ ಹನುಮಾನ್ ಚಾಲಿಸ್ ಪುಸ್ತಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಂಡಳಿಯ ಗೌರವಾಧ್ಯಕ್ಷರಾದ ಚೆನ್ನಪ್ಪ ಗೌಡ ಹಿರ್ಯ, ಅಧ್ಯಕ್ಷರಾದ ದಿನೇಶ್ ಗೌಡ ಕಲ್ಕುರ್ನೀ, ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸತೀಶ್ ಭಂಡಾರಿ ನಾಳ, ಸ್ಥಳೀಯ ಹಿರಿಯ ಭಕ್ತರಾದ ಕೂಸಪ್ಪ ಗೌಡ, ಶಶಿಧರ ಶೆಟ್ಟಿ, ರವಿಚಂದ್ರ ನಾಯಕ್, ಮಂಡಳಿಯ ಪದಾಧಿಕಾರಿಗಳು, ಧಾರ್ಮಿಕ ಶಿಕ್ಷಣ ದ ಮಕ್ಕಳು, ಹಾಗೂ ಎಲ್ಲಾ ಭಕ್ತರು ಉಪಸ್ಥಿತರಿದ್ದರು.

ಹನುಮಾನ್ ಚಾಲಿಸ್ ಪುಸ್ತಕದ ಮಹತ್ವ, ಪಠಿಸುವ ಕ್ರಮಗಳ ಕುರಿತು ಸಮಗ್ರ ಮಾಹಿತಿಯನ್ನು ಸತೀಶ್ ಭಂಡಾರಿ ನಾಳ ಇವರು ನೀಡಿದರು.

LEAVE A REPLY

Please enter your comment!
Please enter your name here