ಉಜಿರೆಯಲ್ಲಿ ಕೂಟ ಮಹಾಜಗತ್ತು ವತಿಯಿಂದ ಆಟಿದ ಕೂಟ

0

ಉಜಿರೆ: ಬೆಳ್ತಂಗಡಿ ಕೂಟ ಮಹಾ ಜಗತ್ತು ಇದರ ಮಹಿಳಾ ವೇದಿಕೆಯಿಂದ ಆಟಿ ಕೂಟವು ಮಹಿಳಾ ಸದಸ್ಯರಲ್ಲೊಬ್ಬರಾದ ಲಕ್ಷ್ಮಿ ಮಾಧವ ಹೊಳ್ಳರವರ ಬಡಕೊಟ್ಟು ಆಶ್ರಯ ನಿವಾಸದಲ್ಲಿ ಜರುಗಿತು.

ಕೂಟ ಮಹಾಜಗತ್ತು ಬೆಳ್ತಂಗಡಿ ಇದರ ಅಧ್ಯಕ್ಷ ವಿಶ್ವನಾಥ ಹೊಳ್ಳ ಮತ್ತು ಮಹಿಳಾವೇದಿಕೆಯ ಅಧ್ಯಕ್ಶೆಯಾಗಿರುವ ನಳಿನಿ ಹೊಳ್ಳ ಇವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು.ನಿಕಟಪೂರ್ವ ಅಧ್ಯಕ್ಷೆಯಾಗಿರುವ ಪದ್ಮಾಕ್ಷಿ ಎಂ.ರಾವ್ ಇವರು ಆಟಿಯ ಆಚರಣೆಯ ಬಗ್ಗೆ,ಮತ್ತು ಆಟಿಯಲ್ಲಿ ತಯಾರಿಸುವ ಆಹಾರಗಳ ಬಗ್ಗೆ ತಿಳಿಸಿಕೊಡುತ್ತಾ ಮುಂದಿನ ಪೀಳಿಗೆಗೂ ಈ ಆಚರಣೆಗಳೆಲ್ಲ ವರ್ಗಾವಣೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಮಹಿಳಾ ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಮನೆಗಳಿಂದ ಆಟಿಯ ವಿಶೇಷ ಖಾದ್ಯಗಳನ್ನು ತಯಾರಿಸಿ ತಂದು ಹಂಚಿಕೊಂಡು ಸೇವಿಸಿ ಸಂತೋಷಪಟ್ಟರು.ಮಕ್ಕಳಿಗೆ ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಅದರಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಮಹಿಳಾವೇದಿಕೆಯ ನಿಕಟಪೂರ್ವ ಅಧ್ಯಕ್ಷೆ ಪದ್ಮಾಕ್ಷಿ ಎಂ ರಾವ್, ಅಧ್ಯಕ್ಷೆ ನಳಿನಿ ಹೊಳ್ಳ, ಕಾರ್ಯದರ್ಶಿ ಅಕ್ಷತಾ ಅಡೂರ್ ಮತ್ತು ಹಿರಿಯ ಸದಸ್ಯೆ ಲಲಿತಾ ರಾವ್ ಉಪಸ್ಥಿತರಿದ್ದರು.
ವೇದಿಕೆಯ ಸದಸ್ಯೆಯರಾದ ಮಮತಾ ಕಾರ್ಯಕ್ರಮ ನಿರೂಪಣೆಯನ್ನು ನೆರವೇರಿಸಿದರು.ವಿದ್ಯಾಶ್ರೀ ಅಡೂರ್ ವಂದಿಸಿದರು.

LEAVE A REPLY

Please enter your comment!
Please enter your name here