ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರಾದ ಜೇಸಿ ಪ್ರಸನ್ನ ಶೆಟ್ಟಿಯವರಿಗೆ “ಉದ್ಯಮ ರತ್ನ” ಪ್ರಶಸ್ತಿ ಪ್ರಧಾನ

0

ಮಡಂತ್ಯಾರು: ಜೇಸಿಐ ಭಾರತದ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಪ್ರತಿಷ್ಠಿತ “ಉದ್ಯಮ ರತ್ನ” ಪ್ರಶಸ್ತಿಯನ್ನು ಮಡಂತ್ಯಾರು ಘಟಕದ ಪೂರ್ವಾಧ್ಯಕ್ಷರು ಜೇಸಿ ಪ್ರಸನ್ನ ಶೆಟ್ಟಿ ಇವರಿಗೆ ಜೇಸಿಐ ಶಂಕರನಾರಾಯಣ ಆಥಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷರಾದ ಜೇಸಿ ಪುರುಷೋತ್ತಮ್ ಶೆಟ್ಟಿಯವರು ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯಲ್ಕೆ, ವಲಯ 15ರ ಉಪಾಧ್ಯಕ್ಷರಾದ ಜೇಸಿ ಭರತ್ ಶೆಟ್ಟಿ, ಗೋಗ್ರಿನ್ ವಿಭಾಗದ ನಿರ್ದೇಶಕರಾದ ಜೇಸಿ ನವೀನ್ ಕೋಡ್ಲಕ್ಕೆ, ಘಟಕದ ಕಾರ್ಯದರ್ಶಿ ಜೇಸಿ ವಿಕೇಶ್ ಮಾನ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here