ಕೊಯ್ಯೂರು: ಕಲ್ಪಾಮೃತ-ಸಾನ್ವಿ ಕೊಬ್ಬರಿ ಎಣ್ಣೆ, ಹಿಟ್ಟಿನ ಗಿರಾಣಿ ಶುಭಾರಂಭ

0

ಕೊಯ್ಯೂರು: ಆದೂರ್ ಪೆರಾಲಿನಲ್ಲಿ ಕಲ್ಪಾಮೃತ – ಸಾನ್ವಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಾಣಿ ಜು.15 ರಂದು ಶುಭಾರಂಭಗೊಂಡಿದೆ.ಪೂರ್ವಾಹ್ನ ವೈದಿಕ ವಿಧಿ ವಿಧಾನಗಳೊಂದಿಗೆ ಜರುಗಿತು.

ಸಂಸ್ಥೆಯ ಮಾಲಕ ಹಾಗೂ ಕುಟುಂಬಸ್ಥರು ದೀಪ ಪ್ರಜ್ವಲಿಸುವ ಮೂಲಕ ಸಂಸ್ಥೆಗೆ ಚಾಲನೆ ನೀಡಿದರು.
ಸಂಸ್ಥೆಯ ಮಾಲಕರಾದ ಹಾಗೂ “ಸುದ್ದಿ ಬಿಡುಗಡೆ” ಪತ್ರಿಕೆ ವಿತರಕರಾದ ವಿನಯ ಕೆ. ಮಾತನಾಡುತ್ತಾ ನಮ್ಮ ಸಂಸ್ಥೆಯು ಕೃಷಿಕರಿಗೆ ಮತ್ತು ಗ್ರಾಹಕರಿಗೆ ಕಚ್ಚಾ ವಸ್ತುಗಳನ್ನು ತಯಾರಿಸಿ, ಮಿತ ದರದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ ಎಂದು ಹೇಳಿ ಗ್ರಾಹಕರ ಸಹಕಾರವನ್ನು ಕೋರಿದರು.

ಈ ಸಂದರ್ಭದಲ್ಲಿ ಕೊಯ್ಯೂರು ಗ್ರಾಮ ಪಂಚಾಯತು ಅಧ್ಯಕ್ಷ ಜಗದೀಶ್ ಮಲೆಬೆಟ್ಟು, ಅಭಿವೃದ್ಧಿ ಅಧಿಕಾರಿ ಡಾ.ಪ್ರಕಾಶ್, ಪಂಚಾಯತ್ ಸದಸ್ಯರು, ಪ್ರಗತಿಪರ ಕೃಷಿಕರಾದ ಪ್ರಚಂಡ ಭಾನು ಪಾಂಬೇಲು, ಉಜಿರೆ ಮಹಾವೀರ ಗ್ರೂಪ್ ಮಾಲೀಕರಾದ ರತ್ನಾಕರ ಹೆಗ್ಡೆ, ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನವೀನ ಕುಮಾರ್ ವಾದ್ಯಕೊಡಿ, ಕಾರ್ಯನಿರ್ವಹಣಾ ಅಧಿಕಾರಿ ಅನಂತಕೃಷ್ಣ ಭಟ್, ಸದಸ್ಯರು, ಸ್ಥಳೀಯ ಪ್ರಾಥಮಿಕ ಶಾಲೆ ಫ್ರೌಡ ಶಾಲೆ, ಸಂಯುಕ್ತ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕರು, ಪ್ರಾಂಶುಪಾಲರು, ಹಿತೈಷಿಗಳು, ಗ್ರಾಮಸ್ಥರು ಆಗಮಿಸಿ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿ ಗಣ್ಯರನ್ನು ಹೊನ್ನಮ್ಮ, ಲೀಲಾವತಿ,ರಜನಿ, ನವೀನ್ ಕೆ, ರಜನಿ ವಿನಯ್ ರವರು ಸ್ವಾಗತಿಸಿ, ಸತ್ಕರಿಸಿ, ಸರ್ವರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here