ಬದನಾಜೆ ಸ.ಉ.ಕಿ.ಪ್ರಾ.ಶಾಲೆಯಲ್ಲಿ ಪರಿಸರ ಕಾರ್ಯಕ್ರಮ, ಹಣ್ಣಿನ ಗಿಡ ನಾಟಿ

0

ಬದನಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು, ಉಜಿರೆ ವಲಯ ಇದರ ವತಿಯಿಂದ, ಶೌರ್ಯ ಘಟಕ, ಪ್ರಗತಿ ಬಂದು ಒಕ್ಕೂಟ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸ.ಉ.ಹಿ.ಪ್ರಾ.ಶಾಲೆ ಬದನಾಜೆಯಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು ಶ್ರೀಮತಿ ಶಾರದಾ,ವಲಯ ಒಕ್ಕೂಟದ ಅಧ್ಯಕ್ಷರಾದ ಉಮ್ಮರ್, ಒಕ್ಕೂಟದ ಅಧ್ಯಕ್ಷರಾದ ಬಾಬು ನಾಯ್ಕ, ತಾಲೂಕಿನ ಕೃಷಿ-ಅಧಿಕಾರಿ ರಾಮಕುಮಾರ್ ವಲಯ ಮೇಲ್ವಿಚಾರಕರಾದ ವನಿತಾ, ಶೌರ್ಯ ಸಂಯೋಜಕಿ ಸೇವಾ-ಪ್ರತಿನಿಧಿ ಆಶಾ,ಸೇವಾ ಪ್ರತಿನಿಧಿ ಹೇಮಲತಾ “ಶೌರ್ಯ” ಘಟಕದ ಸ್ವಯಂಸೇವಕರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದು ಗಿಡನಾಟಿಯನ್ನು ಮಾಡಿದರು.

LEAVE A REPLY

Please enter your comment!
Please enter your name here