ಬೆಳಾಲು ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಬೆಳಾಲು: ಗ್ರಾಮ ಪಂಚಾಯತ್ ಬೆಳಾಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ವಿಭಾಗ ,ಸಂಜೀವಿನಿ ಒಕ್ಕೂಟ ಬೆಳಾಲು, ಗ್ರಾಮ ಅರಣ್ಯ ಸಮಿತಿ ಕುಂಡಡ್ಕ ಇದರ ಆಶ್ರಯದಲ್ಲಿ ಜು.16 ರಂದು ಬೆಳಾಲು ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಬಾಯಿ ಹೆಚ್., ಸದಸ್ಯರಾದ ದಿನೇಶ್ ಕೋಟ್ಯಾನ್, ಪ್ರವೀಣ್ ವಿಜಯ್, ಪಂಚಾಯತ್ ಸಿಬ್ಬಂದಿಗಳು,ಕುಂಡಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗಂಗಾಧರ ಗೌಡ ಸುರುಳಿ, ಗಸ್ತು ವನ ಪಾಲಕ ಸಂತೋಷ್,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಆಶಾ, ಸಂಜೀವಿನಿ ಒಕ್ಕೂಟದ ಹರೀಣಾಕ್ಷಿ, ಯಶೋಧ, ವಸಂತಿ, ಸಾರ್ವಜನಿಕರು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here