ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪೋಷಕರ ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲ್ಪಟ್ಟ “ನಮ್ಮ ಶೌಚಾಲಯ”ದ ಉದ್ಘಾಟನಾ ಕಾರ್ಯಕ್ರಮ

0

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪೋಷಕರ ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲ್ಪಟ್ಟ “ನಮ್ಮ ಶೌಚಾಲಯ”ದ ಉದ್ಘಾಟನ ಕಾರ್ಯಕ್ರಮ ಜು.14 ರಂದು ಶಾಲಾ ವಠಾರದಲ್ಲಿ ನಡೆಯಿತು.ಮಂಡತ್ಯಾರು ರೋಟರಿ ಕ್ಲಬ್ ನ ಅಧ್ಯಕ್ಷ , ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ರಾವ್ ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ, ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಬಿ.ಇ.ಓ ವಿರೂಪಾಕ್ಷಪ್ಪ, ಕೆ.ಪಿ.ಎಸ್ ಪ್ರಾಂಶುಪಾಲರು ಡಾ‌.ಸರೋಜಿನಿ ಆಚಾರ್, ಕೆ.ಪಿ.ಎಸ್ ಹೈಸ್ಕೂಲ್ ಉಪಪ್ರಾಂಶುಪಾಲ ಉದಯ್ ಕುಮಾರ್ ಬಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ ಪ್ರಸಾದ್ ಸಂಪಿಗೆತ್ತಾಯ, ಡಾಕ್ಟರ್ ಗುರುಪ್ರಸಾದ್, ಉದ್ಯಮಿ ಗೋವರ್ಧನ ಬಾಳಿಗ, ನಿವೃತ್ತ ಅಂಚೆ ಮಾಸ್ಟರ್ ಮೋನಪ್ಪ, ಶಾಲಾ ನಿವೃತ್ತ ಶಿಕ್ಷಕ ಮೋನಪ್ಪ, ಜೆ.ಸಿ.ಐ.ಮಂಡತ್ಯಾರ್ ನ ಅಧ್ಯಕ್ಷ ಅಶೋಕ್, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜ್ ಶೇಖರ್ ಶೆಟ್ಟಿ, ನಯನ ಬೇಕರಿಯ ಮಾಲಕ ನೆಲ್ವಿಸ್ಟರ್, ಪಿಲಾತಬೆಟ್ಟು ಸೊಸೈಟಿಯ ನಿವೃತ್ತ ಮಂಜಪ್ಪ ಮೂಲ್ಯ, ಸೇವ್ ಲೈಫ್ ಟ್ರಸ್ಟ್ ಮಂಗಳೂರಿನ ಅರ್ಜುನ್ ಭಂಡಾರ್ಕರ್, ಮುರುಘೇಂದ್ರ ಮಂಡಳಿಯ ಅಧ್ಯಕ್ಷ ಮಂಡತ್ಯಾರು ಗ್ರಾ.ಪಂ.ಸದಸ್ಯ ವಿಶ್ವನಾಥ್, ಪುನೀತ್ , ಮಾಲಾಡಿ ಗ್ರಾ.ಪಂ.ಸದಸ್ಯ ಸಿ.ಆರ್.ಪಿ.ಚೇತಾನ, ಕುಶಾಲ್, ದಿವಾಕರ ಶೆಟ್ಟಿ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ,ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here