ಬೆಂಗಳೂರು: ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ

0

ಬೆಂಗಳೂರು: ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಜು.12ರಂದು ಭೇಟಿ ಚಿತ್ರಕಲಾಕೃತಿಗಳನ್ನು ವೀಕ್ಷಿಸಿದರು.



ಧರ್ಮಾಧಿಕಾರಿಯವರನ್ನು ಕಾಮತ್ ಕಲಾರುಚಿಯ ವೀರೇಂದ್ರ ಕಾಮತ್, ಚಿತ್ರಕಲಾ ಪರಿಷತ್ತಿನ ಸಿಬ್ಬಂದಿ, ಕಲಾಭಿಮಾನಿಗಳಾದ ಸಂತೋಷ್ ಪೈ, ಕುಂಬ್ಳೆ ಲಕ್ಷ್ಮಣ ಪ್ರಭು ಸ್ವಾಗತಿಸಿದರು.

ಪರಿಷತ್ತಿನ ಕಲಾಕೃತಿಗಳ ಬಗ್ಗೆ ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ಆರ್ಟ್ಸ್ ಆ್ಯಂಡ್ ಕ್ರಾಫ್ಟ್ಸ್ ಮೇಳವನ್ನು ಹೆಗ್ಗಡೆಯವರು ವೀಕ್ಷಿಸಿದರು.
ಅವರೊಂದಿಗೆ ಸಹೋದರ ಸುರೇಂದ್ರ ಕುಮಾರ್, ವೀರೇಂದ್ರ ಹೆಗ್ಗಡೆಯವರ ಪುತ್ರಿ ಶೃದ್ದಾ ಅಮಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here