ಅರಸಿನಮಕ್ಕಿ: ಸೈನಿಕ ಕೆ.ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಅಭಿನಂದನೆ

0

ಅರಸಿನಮಕ್ಕಿ: ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡು ಭಾರತೀಯ ಸೈನ್ಯದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿ ಸುಬೇದಾರ್ ಹುದ್ದೆಯವರೆಗೆ ಭಡ್ತಿಗೊಂಡು ಜೂ.30ರಂದು ಸೇವಾ ನಿವೃತ್ತಿ ಹೊಂದಿ ಜು.5ರಂದು ಹುಟ್ಟೂರಿಗೆ ಆಗಮಿಸಿದ ಹತ್ಯಡ್ಕ ಗ್ರಾಮದ ಸೈನಿಕ ಕೆ. ಮಹಾಬಲ ಮುದ್ದಿಗೆಯವರಿಗೆ ನಾಗರಿಕರಿಂದ ಕೊಕ್ಕಡ ಜಂಕ್ಷನ್ ನಿಂದ ಮುದ್ದಿಗೆ ಪೇಟೆವರೆಗೆ ವಾಹನದೊಂದಿಗೆ ಮೆರವಣಿಗೆ ಜರುಗಿತು.


ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾಜಿ ಸೈನಿಕರಾದ ಮೋಹನ್ ಶೆಟ್ಟಿ, ಚೆರಿಯನ್, ಜಯಚಂದ್ರ, ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ, ಕಳೆಂಜ ಗ್ರಾ.ಪಂ.ಅಧ್ಯಕ್ಷ ಪ್ರಸನ್ನ ಎ.ಪಿ., ಅರಸಿನಮಕ್ಕಿ ಗ್ರಾ.ಪಂ.ಸದಸ್ಯ ಸುಧೀರ್ ಕುಮಾರ್, ಉದ್ಯಮಿ ರಹೀಮ್ ಮುದ್ದಿಗೆ ಮಾತನಾಡಿದರು.


ರಾಜರಾಮ ಟಿ.ಮುದ್ದಿಗೆ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಹತ್ಯಡ್ಕ, ಕೊಕ್ಕಡ, ಕಳೆಂಜದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here