ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ: ಬಹುಕಾಲದ ಬೇಡಿಕೆಗೆ ಮನ್ನಣೆ: ಕೆ.ಎಸ್.ಎಂ.ಸಿ.ಎ ಯಿಂದ ಸರಕಾರಕ್ಕೆ ಅಭಿನಂದನೆ

0

ಬೆಳ್ತಂಗಡಿ: ಕರ್ನಾಟಕ ಕ್ರೈಸ್ತರ ಬಹು ದಿನದ ಬೇಡಿಕೆಯಾಗಿದ್ದ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಕರ್ನಾಟಕದ ಜನಮೆಚ್ಚಿದ ಹಾಗೂ ಬಡವರ ಮತ್ತು ತುಳಿತ್ತಾಕ್ಕೊಳಗಾದವರ ದವರ ಆಶಾ ದೀಪವಾಗಿರುವ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ತಮ್ಮ ದಾಖಲೆ ಯ 14ನೇ ಬಿಜೆಟ್ ನಲ್ಲಿ ಘೋಷಿಸಿರುವುದನ್ನು ಕರ್ನಾಟಕ ಸೀರೋಮಲಬಾರ್ ಕ್ಯಾಥೋಲಿಕ್ ಅಸೋ ಸಿಯೇಶನ್ ಬೆಳ್ತಂಗಡಿ ಅಭಿನಂದಿಸಿದೆ.

ಮಾಜಿ ಮುಖ್ಯ ಮಂತ್ರಿ ಸನ್ಮಾನ್ಯ ಬಿ ಎಸ್ ಯಡಿಯೂರಪ್ಪ ನವರು ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಹಲವು ವರ್ಷಗಳು ಕಳೆದರು ನಿಗಮ ಸ್ಥಾಪನೆಯು ಕನಸು ಕನಸಾಗಿಯೇ ಉಳಿದಿತ್ತು.

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಈ ಒಂದು ಘೋಷಣೆ ಯನ್ನು ಕಾರ್ಯ ರೂಪಕ್ಕೆ ತರುವಲ್ಲಿ ಇಂತಹ ನಿಗಮಗಳು ಫಲಕಾರಿ ಯಾಗಲಿದೆ ಎಂದು ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನಿಯ ಶಾಜಿ ಮಾತ್ಯು ಅಭಿಪ್ರಾಯ ವ್ಯಕ್ತಪಡಿಸಿದರು.

ಆದಷ್ಟು ಬೇಗ ನಿಗಮಕ್ಕೆ ಅಧ್ಯಕ್ಷ ರನ್ನು ಮತ್ತು ಸಿಬ್ಬಂದಿ ಯನ್ನು ನಿಯಮಿಸಿ ಕಾರ್ಯ ಪ್ರವ್ರತ್ತ ವಾಗುವಂತೆ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

LEAVE A REPLY

Please enter your comment!
Please enter your name here