ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಉದನೆ ವಲಯ ಮಟ್ಟದ ಮಾತ್ರವೇದಿ ಸಮ್ಮೇಳನ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಮಾತ್ರ ವೇದಿಕೆ ಉದನೆ ವಲಯದ ಒಂದು ದಿನದ ಮಹಿಳಾ ಸಮಾವೇಶ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ಜೂ.29ರಂದು ಹಮ್ಮಿಕೊಳ್ಳಲಾಯಿತು.

ಈ ಸಮಾವೇಶವನ್ನು ಬೆಳ್ತಂಗಡಿ ಧರ್ಮ ಪ್ರಾಂತಿಯ ನಿರ್ದೇಶಕರಾದ ವಂದನಿಯ ಫಾ.ಜೋಬಿ ಪುಲ್ಲಾಟ್ಟ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದನೆ ಫೋರೊನಾ ಧರ್ಮ ಗುರುಗಳಾದ ವಂದನಿಯ ತೋಮಸ್ ಪನಚಿಕ್ಕಲ್ ವಹಿಸದರು.ಶಿರಾಡಿ ಚರ್ಚಿನ ಧರ್ಮ ಗುರುಗಳಾದ ವಂದನಿಯ ಫಾ. ಜೋಸೆಫ್
ಪೂದಕ್ಕುಯಿ ದಿವ್ಯ ಬಲಿಪೂಜೆ ಅರ್ಪಿಸಿದರು.ಬೆಳ್ತಂಗಡಿ ಧರ್ಮ ಪ್ರಾಂತಿಯ ಮಹಿಳಾ ವೇದಿಕೆಯ ಕಾರ್ಯದರ್ಶಿ ಜೇಸಿಂತ ಹಾಗೂ ಎಲ್ಲಾ ಚರ್ಚಿನ ವೇದಿಕೆಯ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಿಳಾ ಫೋರೋನ ಸಂಯೋಜಕಿ ವಂದನಿಯ ಸಿಸ್ಟೆರ್ ಲಿಸ್ ಮಾತ್ಯು ಕಾರ್ಯಕ್ರಮ ನಿರೂಪಸಿದರು.ಕೆ.ಎಸ್.ಎಂ.ಸಿ.ಎ ನಿರ್ದೇಶಕರು ಪಿಲ್ಗ್ರಿಮ್ ಚರ್ಚ್ ನ ಧರ್ಮಗುರುಗಳು ಆದ ವಂದನಿಯ ಫಾ.ಶಾಜಿ ಮಾತ್ಯು ಹೊಸ ವರುಷದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.ಮಹಿಳೆ ಸಮಕಾಲಿನ ಸಮಾಜದಲ್ಲಿ ಎದುರಿಸುತ್ತಿರುವ ವಿವಿದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here