ಶ್ರೀ ಗುರುದೇವ ಪ.ಪೂ.ಕಾಲೇಜು – ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

0

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ 2023-24 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಉಪಸ್ಥಿತಿಯಲ್ಲಿ ನಡೆಯಿತು.
ವಿದ್ಯಾರ್ಥಿ ಸಂಘದ ನಾಯಕನಾಗಿ ದ್ವಿತೀಯ ವಿಜ್ಞಾನ ತರಗತಿಯ ಮಿತ್ರೇಶ್, ಉಪನಾಯಕನಾಗಿ ಪ್ರಥಮ ಕಲಾ ವಿಭಾಗದ ಜೈನುಲ್ ಅಬಿದ್, ಕಾರ್ಯದರ್ಶಿಯಾಗಿ ದ್ವಿತೀಯ ಕಲಾ ವಿಭಾಗದ ಶ್ರೀ ಲತಾ, ಜೊತೆ ಕಾರ್ಯದರ್ಶಿಯಾಗಿ ಪ್ರಥಮ ವಾಣಿಜ್ಯ ವಿಭಾಗದ ಸಂಜನಾ ಫಡ್ಕೆ ಆಯ್ಕೆಯಾದರು.

ಸಾಂಸ್ಕೃತಿಕ ಸಮಿತಿ ಪ್ರತಿನಿಧಿಗಳಾಗಿ ದ್ವಿತೀಯ ವಾಣಿಜ್ಯ ವಿಭಾಗದ ರಿತೇಶ್ ಮತ್ತು ದೀಕ್ಷಾ, ಕ್ರೀಡಾ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ವಾಣಿಜ್ಯ ವಿಭಾಗದ ನಂದನ್ ಮತ್ತು ಕೃತಿ, ಪ್ರಥಮ ವಾಣಿಜ್ಯ ವಿಭಾಗದ ಪ್ರಶಾಂತ್, ಶಿಸ್ತು ಪಾಲನಾ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ಕಲಾ ವಿಭಾಗದ ಸಚಿನ್ ಕುಮಾರ್ ಮತ್ತು ಪ್ರಥಮ ವಿಜ್ಞಾನ ವಿಭಾಗದ ಓಜ್ವಿನ್, ಪ್ರಚಾರ ಮತ್ತು ದಾಖಲಾತಿ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ವಾಣಿಜ್ಯ ವಿಭಾಗದ ಅರ್ಚನಾ ಮತ್ತು ದ್ವಿತೀಯ ವಿಜ್ಞಾನ ವಿಭಾಗದ ಬಿ.ಎಸ್.ನಿತೇಶ್, ಸ್ವಚ್ಟತಾ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ವಿಜ್ಞಾನ ವಿಭಾಗದ ಹನಮಂತ, ದ್ವಿತೀಯ ವಾಣಿಜ್ಯ ವಿಭಾಗದ ಕಾವ್ಯ ಹಾಗೂ ಅಭಿಷೇಕ್, ವಿದ್ಯಾರ್ಥಿ ಕ್ಷೇಮ ಪಾಲನಾ ವಿಭಾಗದ ಪ್ರತಿನಿಧಿಗಳಾಗಿ ದ್ವೀತಿಯ ವಾಣಿಜ್ಯ ವಿಭಾಗದ ಸಾನ್ವಿ ಮತ್ತು ಮಹಮ್ಮದ್ ಹಸೀಬ್, ಸಾಹಿತ್ಯಿಕ ವಿಭಾಗದ ಪ್ರತಿನಿಧಿಗಳಾಗಿ ದ್ವಿತೀಯ ವಿಜ್ಞಾನ ವಿಭಾಗದ ಎ. ಜತಿಶ್ ಕೃಷ್ಣ, ದ್ವಿತೀಯ ಕಲಾ ವಿಭಾಗದ ವೈಷ್ಣವಿ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಜೋವಿಶ್ ಇವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here