ಬೆಳಾಲು: ಮಾಯ ಶಾಲೆಯ ಪೋಷಕರಿಂದ ಶ್ರಮದಾನ

0

ಬೆಳಾಲು: ಸ.ಉ.ಪ್ರಾ. ಶಾಲೆ ಮಾಯ ಇಲ್ಲಿ ಜೂ.24ರಂದು ಶಾಲಾ ಮಕ್ಕಳ ಪೋಷಕರಿಂದ ಶ್ರಮದಾನ ಮಾಡಲಾಯಿತು.

ಪೋಷಕರೆಲ್ಲರೂ ಕೂಡಿ ಶಾಲೆಯ ಆವರಣದ ಸ್ವಚ್ಛಗೊಳಿಸುವ ಜೊತೆಗೆ ಶಾಲಾ ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಶಾಲೆಗೆ ನೀಡಿದ್ದ ಗಿಡಗಳನ್ನನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುರೇಂದ್ರ ಗೌಡ ಸುರುಳಿ, ಹಾಗೂ ಎಸ್.ಡಿ.ಎಂ.ಸಿ ಇತರೆ ಸದಸ್ಯರು, ಮುಖ್ಯಶಿಕ್ಷಕರಾದ ವಿಠಲ್ ಎಂ , ಸಹಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಶಶಿಧರ ಶಿಲ್ಪಿ ಇವರ ಸಹಕಾರದಿಂದ ಶಾಲಾ ಮೈದಾನದಲ್ಲಿ ಕಬ್ಬಡಿ ಅಂಕಣವನ್ನು ಹಾಕಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು. ಮತ್ತೊಂದು ಕಡೆ ಊರಿನ ಯೋಗ ಗುರುಗಳಾದ ಶ್ರೀ ಬಾಲಕೃಷ್ಣ ರವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

LEAVE A REPLY

Please enter your comment!
Please enter your name here