ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎಲ್ಲಾ ನಿರ್ದೇಶಕರ ಅವಿರೋಧ ಆಯ್ಕೆ- ಅಧ್ಯಕ್ಷರಾಗಿ ಕುಮಾರ ಹೆಗ್ಡೆ, ಉಪಾಧ್ಯಕ್ಷರಾಗಿ ಜೋಸ್ಲಿ ಫೆರ್ನಾಂಡಿಸ್

0

ಗುಂಡೂರಿ: ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಜೂ.18 ರಂದು ಚುನಾವಣೆ ನಿಗದಿಯಾಗಿದ್ದು ಒಟ್ಟು 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ 7 ಸ್ಥಾನಕ್ಕೆ ಪಿ.ರಮೇಶ್ ಪೂಜಾರಿ ಗುಂಡೂರಿ, ಆನಂದ ಸಾಲಿಯಾನ್ ಬಜಿರೆ, ಭಾಸ್ಕರ ಬಲ್ಯಾಯ ವೇಣೂರು, ಜೋಸ್ಲಿ ಫೆರ್ನಾಂಡಿಸ್ ಬಜಿರೆ, ವಸಂತ ಗೌಡ ಗುಂಡೂರಿ, ಪ್ರವೀಣ್ ಚಂದ್ರ ಜೈನ್ ಗುಂಡೂರಿ, ಸೇಸಪ್ಪ ಪೂಜಾರಿ ಗುಂಡೂರಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸುಂದರ ಬಜಿರೆ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ವಿಮಲ ಬಜಿರೆ, ಹಿಂದುಳಿದ ವರ್ಗ ಎ. ವರ್ಗದಿಂದ ನವೀನ್ ವೇಣೂರು, ಹಿಂದುಳಿದ ವರ್ಗ ಬಿ. ವರ್ಗದಿಂದ ಕುಮಾರ ಹೆಗ್ಡೆ ಗುಂಡೂರಿ, 2 ಸ್ಥಾನ ಮಹಿಳಾ ಮೀಸಲು ಕ್ಷೇತ್ರದಿಂದ ಸುನಂದ ಗುಂಡೂರಿ, ಶಾರದಾ ಗುಂಡೂರಿ ಇವರು ಆಯ್ಕೆಯಾದರು.

ಜೂ.27ರಂದು ನಡೆದ ಪ್ರಥಮ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರಾಗಿ ಕುಮಾರ ಹೆಗ್ಡೆ, ಉಪಾಧ್ಯಕ್ಷರಾಗಿ ಜೋಸ್ಲಿ ಫೆರ್ನಾಂಡಿಸ್ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ನಿರ್ವಹಿದರು. ಕಾರ್ಯದರ್ಶಿ ರಾಜು ಪೂಜಾರಿ ಮತ್ತು ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here